ಪ್ರಾಚಾರ್ಯರಾಗಿ ಅಧಿಕಾರ

ಪ್ರಾಚಾರ್ಯರಾಗಿ ಅಧಿಕಾರ

ಪಾವಗಡ:ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ವೈ.ಇ. ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗತ ವೈಭವವನ್ನು ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ನೂತನ ಪ್ರಾಂಶುಪಾಲರಾದ ಡಾ.ವೈ.ಎಸ್.ಹನುಮಂತರಾಯಪ್ಪ ತಿಳಿಸಿದರು.
ಗುರುವಾರ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಇದೇ ಕಾಲೇಜಿನಲ್ಲಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದ ನನಗೆ ಪ್ರಾಂಶುಪಾಲರಾಗಿ ಮತ್ತೆ ಇಲ್ಲಿಯೇ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಬರದ ನಾಡು ಪಾವಗಡ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನುರಿತ ಉಪನ್ಯಾಸಕರಿದ್ದಾರೆ. ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವುದರಿಂದ ಖಾಸಗಿ ಕಾಲೇಜಿನ ಡೊನೇಷನ್ ಹಾವಳಿಯು ತಪ್ಪಿದಂತಾಗುತ್ತದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos