ಟಿಕೆಟ್ ಸಿಗದೆ ‘ಜಗನ್ ಸರ್, ಐ ಲವ್ ಯೂ…’ ಎಂದು ಆತ್ಮಹತ್ಯೆ ಯತ್ನ!

ಟಿಕೆಟ್ ಸಿಗದೆ ‘ಜಗನ್ ಸರ್, ಐ ಲವ್ ಯೂ…’ ಎಂದು ಆತ್ಮಹತ್ಯೆ ಯತ್ನ!

ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ಟಿಕೆಟ್ ಸಿಗಲಿಲ್ಲವೆಂದು ಬಂಡೇಳುವುದು, ಪಕ್ಷಾಂತರ ಮಾಡುವುದನ್ನು ನೋಡಿದ್ದೀವಿ, ಕೇಳಿದ್ದೀವಿ. ಆದರೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ, ದಲಿತ ನಾಯಕ ಎಮ್.ಸುನಿಲ್ ಕುಮಾರ್ (50) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವೃತ್ತಿಯಲ್ಲಿ ಅವರು ವೈದ್ಯರಾಗಿದ್ದಾರೆ. ಆಂಧ್ರದ ಪುತಲಪಟ್ಟು ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದ ಕುಮಾರ್‌ಗೆ ಟಿಕೆಟ್ ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.ಇದರಿಂದ ನಿರಾಸೆಗೊಳಗಾದ ಅವರು ಮಣಿಕಟ್ಟು ಕತ್ತರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮ್ಮ ಈ ದುಡುಕಿನ ಕೃತ್ಯದ ವೀಡಿಯೋವನ್ನು ಸಹ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.

ಕಣ್ಣೀರು ಹಾಕುತ್ತಾ ಪಕ್ಷದ ವರಿಷ್ಠ ಜಗನ್ ಅವರನ್ನು ಸಂಬೋಧಿಸಿ ಮಾತನಾಡಿರುವ ಕುಮಾರ್ , ” ಜಗನ್ ಸರ್ ಐ ಲವ್ ಯೂ ವೆರಿ ಮಚ್. ಆದರೆ ನಾನು ಜೀವನಕ್ಕೆ ಅಂತ್ಯ ಕೊಡಲು ಬಯಸಿದ್ದೇನೆ. ಪಕ್ಷದಿಂದ ನನಗೆ ಟಿಕೆಟ್ ಕೊಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ 5 ವರ್ಷಗಳಿಂದ ನಾನು ನಿಮ್ಮ ಹೆಜ್ಜೆಯನ್ನೇ ಅನುಸರಿಸಿದ್ದೇನೆ. ನನ್ನ ಸಾವಿಗೂ ಮೊದಲು ನಾನು ಈ ವೀಡಿಯೋವನ್ನು ನಿಮಗೆ ಕಳಿಸುತ್ತಿದ್ದೇನೆ” , ಎಂದಿದ್ದಾರೆ.

ಕುಮಾರ್ ಅವರನ್ನು ಮದನಪಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಪ್ರಾಣಾಪಾಯದಿಂದ ಮುಕ್ತರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ. ಟಿಕೆಟ್ ಸಿಗುವುದಿಲ್ಲವೆಂಬ ಸುದ್ದಿ ಕೇಳಿದ ಮೇಲವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದರು. ತಮ್ಮ ರಾಜಕೀಯ ಜೀವನ ಅನಿಶ್ಚತತೆಗೆ ಜಾರುತ್ತಿರುವುದರಿಂದ ನೊಂದ ಅವರು ಆತ್ಮಹತ್ಯೆಗೆ ಯತ್ನಿಸಿದರು ಎಂದು ಅವರ ಪತ್ನಿ ಹೇಳಿದ್ದಾರೆ. ಗುರುವಾರ ಅವರು ರೆಡ್ಡಿ ಅವರನ್ನು ಭೇಟಿಯಾಗಲು ಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ 2016ರಲ್ಲಿ ಇತರ 23 ಶಾಸಕರ ಜತೆ ಸೇರಿ ತೆಲುಗು ದೇಶಂ ವರಿಷ್ಠ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ಕೊಡಲು ಮಂದಾದ ಬಳಿಕ ಕುಮಾರ್ ಪಕ್ಷದಲ್ಲಿ ಮೂಲೆಗುಂಪಾಗಿದ್ದರು ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos