ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಜಕ್ಕೂರು ಕೆರೆ ಬಳಿ ಕೆಲವು ಯುವಕರು 23 ವರ್ಷದ ಬೆತ್ತಲೆ ಹುಡುಗಿಯನ್ನು ಚಾಕುವಿನಿಂದ ಕತ್ತಿಗೆ ಇರಿಯರು ಪ್ರಯತ್ನಿಸಿದ್ದಾರೆ, ಇದನ್ನು ಕಂಡ ಸ್ಥಳೀಯರು ತಕ್ಷಣವೇ ಯುವತಿಯನ್ನು ಕಾಪಾಡಿ, ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ರವಾನಿಸಲಾಯಿತು. ಸ್ಥಳಕ್ಕೆ ಧಾವಿಸಿದ ಸಂಪಿಗೆಹಳ್ಳಿ ಠಾಣೆಯ ಪೋಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ಕೆದಕಿ ನೋಡಿದಾಗ, ದುಷ್ಕರ್ಮಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಮಗಳನ್ನು ಕಾಪಾಡಬೇಕಾಗಿದೆ ತಾಯಿಯೇ ಮಗಳ ಮೇಲೆ ಸಾಮೂಹಿಕ ಅತ್ಯಾಚಾರದ ಡೀಲ್ ಕೊಟ್ಟಿದ್ದಾಳೆ ಎನ್ನುವ ಸಂಶಯವೂ ಪೊಲೀಸರಿಗೆ ಇದೆ. ಕಾರಣ ಇದೇ ತಾಯಿ ಮಗಳನ್ನು ಬಾರ್ ಗರ್ಲ್ ಆಗಿ ಹೋಗುವಂತೆ ಒತ್ತಾಯಿಸಿದ್ದಾಳೆ, ಮತ್ತು ತನ್ನ ಮಗಳನ್ನು ಹಣ ಪಡೆದು ಈ ದಂಧೆಗೆ ಮಾರಾಟ ಮಾಡಿದ್ದಾಳೆ ಎನ್ನುವ ಆರೋಪವೂ ಕೇಳಿಬಂದಿದೆ. ನಂತರ, ಈ ದಂಧೆಗೆ ಒಪ್ಪದ ಮಗಳನ್ನು ಕೊಲೆ ಮಾಡಲು ತಾಯಿ ಹೇಳಿದ್ದು ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ, ಈ ಬಗ್ಗೆ ಸಂಪಿಗೆಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.