ಬಿಜೆಪಿ ಬೆಂಬಲಿತ ಸದಸ್ಯರಿಂದ ಹಲ್ಲೆ

ಬಿಜೆಪಿ ಬೆಂಬಲಿತ ಸದಸ್ಯರಿಂದ ಹಲ್ಲೆ

ಚಿಕ್ಕಬಾಣವಾರ, ನ. 07: ಪಂಚಾಯತಿ ಸಭೆಯಲ್ಲಿ ಪಶ್ನೆ ಮಾಡಿದಕ್ಕೆ ಹಲ್ಲೆ, ಬಿಜೆಪಿ ಬೆಂಬಲಿತ ಸದಸ್ಯರಿಂದ ಹಲ್ಲೆ, ಬೆಂಗಳೂರು ಹೊರವಲಯ ಚಿಕ್ಕಬಾಣವಾರ ಪಂಚಾಯತಿಯಲ್ಲಿ ಘಟನೆ.

ನೆಲಮಂಗಲ, ನ. 07: ಪಂಚಾಯತಿ ಸಭೆಯಲ್ಲಿ ಪಶ್ನೆ ಮಾಡಿದಕ್ಕೆ ಗ್ರಾಮ ಪಂಚಾಯತಿಯ ಬಿಜೆಪಿ ಸದಸ್ಯರಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ಚಿಕ್ಕಬಾಣವಾರ ಪಂಚಾಯತಿಯಲ್ಲಿ ನಡೆಯುತ್ತಿದ್ದ ಗ್ರಾಮಸಭೆಯಲ್ಲಿ, ಪಂಚಾಯತಿ ಸದಸ್ಯರ ವರ್ತನೆ ಗೂಂಡಗಳ ರೀತಿ ಕಂಡಿದೆ. ಇನ್ನೂ ಚಿತ್ರೀಕರಣ ಮಾಡಲು ಮುಂದಾದ ಮಾದ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದಿದ್ದು, ಪತ್ರಕರ್ತರನ್ನ ಸುತ್ತುವರೆದು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇಷ್ಟೇಲ್ಲಾ ಘಟನೆ ದಾಸರಹಳ್ಳಿ ಶಾಸಕ ಮಂಜುನಾಥ್ ಮುಂದೆಯೇ ನಡೆದ್ದು, ಬಿಜಿಪಿ ಕಾರ್ಯಕರ್ತರ ಗೂಂಡ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕಬೀರ್, ಬಿಎಲ್ ಎನ್. ಸಿಂಹ, ಗಿರೀಶ್ ಎಂಬ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಹಲ್ಲೆ ನಡೆಸಿದ್ದಾರೆ.

ಗ್ರಾಮ ಸಭೆಯಲ್ಲಿ  ಗ್ರಾಮದಲ್ಲಿ ಅಭಿವೃದ್ಧಿ ಶೂನ್ಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಅಲ್ಲದೇ ಏಕಾಏಕಿ ರೌಡಿಗಳಂತೆ ಸದಸ್ಯರು ವರ್ತಿಸಿದ್ದಾರೆ. ಬಿಜೆಪಿ ಸರ್ಕಾರ ಇದೆ ಎಂದು ಪೊಲೀಸರ ಮುಂದೆಯೇ ಇಷ್ಟೇಲ್ಲಾ ಘಟನೆ ನಡೆದಿದೆ. ಇನ್ನೂ ಈ ಮೂಕ ಪ್ರೇಕ್ಷಕರಂತೆ ಸೋಲದೇವನಹಳ್ಳಿ ಪೊಲೀಸರು ತಮ್ಮ ಕಾರ್ಯವೈಖರಿ ತೋರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos