ಮುಂಬೈ, ಜು.10 : ಮುಂಬೈ ಹೋಟೆಲ್ ನಲ್ಲಿರು ಅತೃಪ್ತ ಶಾಸಕರ ಭೇಟಿಯಾಗಲು ಡಿಕೆ ಶಿವಕುಮಾರ್ ಅವರು ಹೋಟೆಲ್ ಎದುರು ಕಾದು ಕುಳಿತಿದ್ದರೆ. ಇತ್ತ ಕಡೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಮುಂಬೈ ಹೋಟೆಲ್ ನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮಾತನಾಡಲು ಡಿಕೆ ಶಿವಕುಮಾರ್ ಮುಂಬೈಗೆ ತೆರಳಿದ್ದು, ಆದರೆ ಅಲ್ಲಿದ್ದ ಶಾಸಕರನ್ನು ಭೇಟಿ ಮಾಡಲು ಡಿಕೆ ಶಿವಕುಮಾರ್ ಹರಸಾಹಸ ಪಡುತ್ತಿದ್ದಾರೆ. ಇತ್ತ ಕಡೆ ರಮೇಶ್ ಜಾರಕಿಹೊಳಿ, ನಾವು ಯಾವುದೇ ಕಾರಣಕ್ಕೂ ಡಿಕೆಶಿ ಭೇಟಿಯಾಗಲ್ಲ. ಅಷ್ಟೇ ಅಲ್ಲ ಇವತ್ತು ಮತ್ತೆ ನಾಲ್ವರು ಶಾಸಕರು ನಮ್ಮ ಜೊತೆ ಸೇರಲಿದ್ದಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರದ ನಾಯಕರಿಗೆ ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಮನವೊಲಿಸುವ ಕೆಲಸ ಒಂದು ಕಡೆಯಾದರೆ ಇನ್ನೊಂದು ಕಡೆ ತಮ್ಮ ಜೊತೆಯಲ್ಲಿರುವ ಶಾಸಕರ ಕಾಪಾಡಿಕೊಳ್ಳುವ ಜವಬ್ದಾರಿ ಹೆಗಲಿದ್ದಂತಾಗಿದೆ.