ಬೆಂಗಳೂರು, ಸೆ. 30 : ಎಟಿಎಂಗೆ ತುಂಬಬೇಕಿದ್ದ 99 ಲಕ್ಷ ರೂ. ಹಣದ ಜೊತೆಗೆ ‘ರೈಟರ್ ಸೇಫ್ ಗಾರ್ಡ್’ ಕಂಪನಿಯ ವಾಹನ ಚಾಲಕ ಪರಾರಿಯಾಗಿದ್ದಾನೆ.
ಘಟನೆ ಹಿಂದೆ ಕಸ್ಟೋಡಿಯನ್ಗಳು ಹಾಗೂ ಗನ್ಮ್ಯಾನ್ ಕೈವಾಡವಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿಅವರನ್ನು ಕೆ.ಜಿ. ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಚ್ಆರ್ಬಿಆರ್ ಲೇಔಟ್ನಲ್ಲಿಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಮಂಡ್ಯ ಮೂಲದ ಪವನ್ ಕುಮಾರ್ ಹಣದೊಂದಿಗೆ ಪರಾರಿಯಾಗಿರುವ ಚಾಲಕ. ಬ್ಯಾಂಕ್ಗಳ ಹಣವನ್ನು ಎಟಿಎಂ ಕೇಂದ್ರಗಳಿಗೆ ತುಂಬುವ ‘ರೈಟರ್ ಸೇಫ್ ಗಾರ್ಡ್’ ಕಂಪನಿಯಲ್ಲಿಪವನ್ ಕೆಲಸ ಮಾಡುತ್ತಿದ್ದ. ವಾರದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ.