ಅಥಣಿ, ನ. 27: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ರಚನೆಗೂ ಮುನ್ನವೇ ನನ್ನನ್ನು ಬಿಜೆಪಿ ಬರುವಂತೆ ಆಹ್ವಾನ ನೀಡಲಾಗಿತ್ತು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಅಥಣಿ ಉಪಚುನಾವಣೆ ಕ್ಷೇತ್ರದ ಪ್ರಚಾರದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ದೋಸ್ತಿ ಸರ್ಕಾರದ ರಚನೆಗೂ ಮುನ್ನವೇ ಗೋಕಾಕ್ ಮೂಲದ ದೊಡ್ಡವರು ನನ್ನನ್ನು ಹೈದರಾಬಾದ್ ನಲ್ಲಿ ಸಭೆ ಇದೆ ಎಂದು ಕರೆದು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದರು. ಅವರ ಮಾತನ್ನು ಕೇಳಿ ನನ್ನ ಎದೆ ಝಲ್ ಅಂತು. ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲೂ ಬರುವುದಿಲ್ಲ ಎಂದು ಹೇಳಿ ಸಭೆಯಿಂದ ಹೊರಬಂದೆ ಎಂದು ಹೇಳಿದ್ದಾರೆ.