ವಿವಿಧ ಕಾಮಗಾರಿಗಳಿಗೆ ಅರವಿಂದ್ ಲಿಂಬಾವಳಿ ಚಾಲನೆ

ವಿವಿಧ ಕಾಮಗಾರಿಗಳಿಗೆ ಅರವಿಂದ್ ಲಿಂಬಾವಳಿ ಚಾಲನೆ

ಮಹದೇವಪುರ, ಡಿ. 12:  ಬಹು ದಿನಗಳಿಂದ ನೆನುಗುದಿಗೆ ಬಿದ್ದಿದ್ದ ವರ್ತೂರು ರಸ್ತೆ ಅಗಲಿಕಾರಣ ಕಾಮಗಾರಿ ಮೂಹುರ್ತ ಕೂಡಿ ಬಂದಿದ್ದು, ಇಂದು ಚಾಲನೆ ನೀಡಲಾಗಿದೆ ಎಂದು ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ತಿಳಿಸಿದರು.

ಕ್ಷೇತ್ರದ ವರ್ತೂರು ವಾರ್ಡ್ ನಲ್ಲಿ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು. ವಾರ್ಡ್ನ ಪಣತ್ತೂರು, ಗುಂಜೂರು ಗ್ರಾಮಗಳಲ್ಲಿ ಒಳ ಚರಂಡಿ ಕಾಮಗಾರಿ ಬಾಕಿ ಇದ್ದು, ಚಾಲನೆ ನೀಡಲಾಯಿತು ಎಂದರು.

ವರ್ತೂರು ಮುಖ್ಯರಸ್ತೆ ಕಿರಿದಾಗಿದ್ದು ಜನರು ದಿನನಿತ್ಯ ಕಿರಿಕಿರಿ ಅನುಭವಿಸಿತ್ತಿದ್ದು ಅಲ್ಲದೆ ಪ್ರತಿವರ್ಷ ನಡೆಯುವ ಕರಗ ಹಾಗೂ ರಥೋತ್ಸವ ಸಮಯದಲ್ಲಿ ಬಾರಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಈ ಸಮಸ್ಯೆ ಉಳಿದಿತ್ತು. ಈ ಬಾರಿ ರಾಜ್ಯದಲ್ಲಿ ನಮ್ಮದೆ ಸರ್ಕಾರ ಅಧಿಕಾರದಲ್ಲಿದ್ದು, ಎಲಿವೇಟೆಡ್ ರಸ್ತೆ ಕಾಮಗಾರಿಗೆ ಅನುಮತಿ ದೊರೆತಿದ್ದು ಈ ಭಾಗದ ಜನರ ಬಹುದಿನಗಳ ಕನಸು ನನಸಾದಂತಾಗಿದೆ ಎಂದರು.

ವರ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ 163.18 ಕೋಟಿ ರೂ.ಗಳ ಸರ್ಕಾರಿ ಅನುಧಾನದಲ್ಲಿ ಎಲಿವೇಟೆಡ್ ಕಾರಿಡಾರ್ ರಸ್ತೆ ಕಾಮಗಾರಿ ಹಾಗೂ ಗುಂಜೂರು ರಿಂದ ಗುಂಜೂರುಗೆ ನೂತನ ಬಿಎಂಟಿಸಿ ಬಸ್ಸು ಮಾರ್ಗಕ್ಕೆ ಚಾಲನೆ ನೀಡಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಪುಷ್ಪ ಮಂಜುನಾಥ್, ಕ್ಷೇತ್ರದ ಅಧ್ಯಕ್ಷ ರಾಜಾರೆಡ್ಡಿ, ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ವರ್ತೂರು ಶ್ರೀಧರ್, ಮನೋಹರ್ ರೆಡ್ಡಿ, ಸುನೀಲ್, ಕುಪ್ಪಿ ಮಂಜುನಾಥ್, ವಿಜಯ್‌ ಕುಮಾರ್, ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos