ದೇಶದ ಅಭಿವೃದ್ದಿಗಾಗಿ ಮೋದಿಗೆ ಮತ ಹಾಕಿ: ಅರವಿಂದ ಲಿಂಬಾವಳಿ

ದೇಶದ ಅಭಿವೃದ್ದಿಗಾಗಿ ಮೋದಿಗೆ ಮತ ಹಾಕಿ: ಅರವಿಂದ ಲಿಂಬಾವಳಿ

ಬೆಂಗಳೂರು: ಲೋಕಸಭೆ ಚುನಾವಣೆ 2024ರ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಸೇರಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಿ ವಿ ರಾಮನಗರ, ವಿಧಾನಸಭಾ ಕ್ಷೇತ್ರದ ಜೀವನ್ ಭೀಮ ನಗರದ ನ್ಯಾಷನಲ್ ಸೆಂಟರ್ ಫಾರ್ ಜೀವನ್ ಭೀಮ ನಗರ ಕೇಂದ್ರದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಕುಟುಂಬದೊಂದಿಗೆ ಮತದಾನ ಮಾಡಿ ಮಾತನಾಡಿದರು.

ದೇಶದ ಅಭಿವೃದ್ಧಿ ಮತ್ತು ರಕ್ಷಣೆ ಬಹಳ ಮುಖ್ಯ 10 ವರ್ಷಗಳ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ. ಇಂದು ಪ್ರತಿಯೊಬ್ಬರು ನಿಮ್ಮ ಮತ ಚಲಾವಣೆ ಮಾಡಿ ಎಂದು ಮನವಿ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos