ಶ್ರೀನಗರ, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಜಮ್ಮು-ಕಾಶ್ಮೀರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶುಕ್ರವಾರ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ನಿನ್ನೆಯಷ್ಟೇ ಬಾರಾಮುಲ್ಲದಲ್ಲಿ ಸೈನಿಕರು ಇಬ್ಬರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದರು. ಇದಾದ ಕೇವಲ 12 ಗಂಟೆಯ ಅವಧಿಯಲ್ಲಿ ಮತ್ತೆ ಸೇನೆ ಮೂವರು ಉಗ್ರರರನ್ನು ಸೆದೆಬಡಿದಿದೆ.
ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಭದ್ರತಾ ಪಡೆ ಇಲ್ಲಿನ ಬಂಡಿಪೋರಾ ಜಿಲ್ಲೆಯಲ್ಲಿ ಶೋಧ ಕಾರ್ಯಕೈಗೊಂಡು ಲಷ್ಕರ್ ಇ-ತೋಯ್ಬಾದ ಇಬ್ಬರು ಉಗ್ರರನ್ನು ಗುಂಡಿಕ್ಕಿ ಕೊಂದಿದೆ. ಅಲ್ಲದೆ, ಹಾಜಿನ್ ಜಿಲ್ಲೆಯಲ್ಲಿಯೂ ನಡೆದ ಗುಂಡಿನ ಕಾಳಗದಲ್ಲಿ ಸೇನೆ, ಎಲ್ಇಟಿ ಕಮಾಂಡರ್ ಅಲಿ ಭಾಯ್ ಎಂಬಾತನ್ನು ಹೊಡೆದುರುಳಿಸಿದೆ.
ಸದ್ಯ ಶೋಪಿಯಾನ ಜಿಲ್ಲೆಯ ರತ್ನಿಪೊರ ಪ್ರದೇಶದಲ್ಲಿ ಭದ್ರತಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.