ಬೆಂಗಳೂರು, ಜೂ. 28 : ಮುಂದಿನ 5 ವರ್ಷಗಳಲ್ಲಿ ನಗರದಲ್ಲಿ ಅಪಾರ್ಟ್ಮೆಂಟ್ ಕಟ್ಟೋದಕ್ಕೆ ತಡೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಅಪಾರ್ಟ್ಮೆಂಟ್ ಕಟ್ಟೋಕೆ ಇನ್ಮುಂದೆ ಬೆಂಗಳೂರಿನಲ್ಲಿ ಅನುಮತಿ ಸಿಗೋದು ಕಷ್ಟ.
ಏಕೆಂದರೇ ಮುಂದಿನ ಐದು ವರ್ಷಗಳ ವರೆಗೆ ಅಪಾರ್ಟ್ಮೆಂಟ್ ಕಟ್ಟೋದನ್ನು ನಿಲ್ಲಿಸಲು ರಾಜ್ಯಸರ್ಕಾರದಿಂದ ಚಿಂತನೆ ನಡೆದಿದೆ. ಈ ಕುರಿತು ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಅಪಾರ್ಟ್ಮೆಂಟ್ ಗಳಿಗೆ ನೀರಿನ ಪೂರೈಕೆ ಕಷ್ಟವಾಗುತ್ತಿದೆ. ಹೀಗಾಗಿ ಅಪಾರ್ಟ್ಮೆಂಟ್ ಗಳಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು. ಶೀಘ್ರದಲ್ಲಿಯೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ನಿರ್ಧಾರವನ್ನು ಪ್ರಕಟಿಸಲಾಗುತ್ತದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.