ಬೆಂಗಳೂರು, ಮಾ. 27, ನ್ಯೂಸ್ ಎಕ್ಸ್ ಪ್ರೆಸ್: ಬಾರೀ ಕುತುಹಲ ಮುಡಿಸಿರುವ ಮಂಡ್ಯ ಕ್ಷೇತ್ರದ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಇದೇ ಏ. 2 ರಿಂದ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕಿಳಿಯಲಿದ್ದಾರೆ.
ಮಂಡ್ಯ ಪ್ರಚಾರಕ್ಕೆ ಏ. 2ನೇ ತಾರೀಖಿನಿಂದ ಹೋಗುತ್ತೇನೆ ಅಂತ ಸ್ವತಃ ದರ್ಶನ್ ಹೇಳಿದ್ದಾರೆ. ಅತ್ತ ನಟ ಸುದೀಪ್ ಕೂಡ ಏ. 10 ಹಾಗೂ 11ರಂದು ಸುಮಲತಾ ಪರವಾಗಿ ಕ್ಯಾಂಪೇನ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.