ಅಪ್ಪು ನಿರ್ಮಾಣ : ಸತ್ಯ ಪ್ರಕಾಶ್ ನಿರ್ದೇಶನ

ಅಪ್ಪು ನಿರ್ಮಾಣ : ಸತ್ಯ ಪ್ರಕಾಶ್ ನಿರ್ದೇಶನ

ಬೆಂಗಳೂರು, ಮೇ 13, ನ್ಯೂಸ್ ಎಕ್ಸ್  ಪ್ರೆಸ್: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿ ಆರ್ ಕೆ ಬ್ಯಾನರ್ ನಿಂದ ‘ಕವಲುದಾರಿ’ ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಕೂಡ ಪಡೆದುಕೊಂಡಿದೆ.ಇದರ ನಂತರ

ವಿಭಿನ್ನವಾದ ಚಿತ್ರಗಳು ಮೂಡಿ ಬರುತ್ತಿವೆ ಎನ್ನಲಾಗಿದೆ. ಮೊದಲ ಸಿನಿಮಾ ರಿಲೀಸ್ ಮಾಡಿ ಸಕ್ಸಸ್ ನ ಸಂತಸದಲ್ಲಿರುವ ಪಿ ಆರ್ ಕೆ ನಿರ್ಮಾಣ ಸಂಸ್ಥೆಯ ಬತ್ತಳಿಯಲ್ಲಿ ನಾಲ್ಕೈದು ಸಿನಿಮಾಗಳಿವೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಹೊಸ ರೀತಿಯ, ಅಭಿರುಚಿಯುಳ್ಳ ಚಿತ್ರಗಳನ್ನು ಪ್ರೇಕ್ಷಕರಿಗೆ ಉಣ ಬಡಿಸಬೇಕೆನ್ನುವ ಪ್ರಯತ್ನ ಪಿ ಆರ್ ಕೆ ಬ್ಯಾನರ್ ನ ಉದ್ದೇಶವಾಗಿದೆ.

ಈ ಬ್ಯಾನರ್ ಗೆ ನಿರ್ದೇಶಕ ಸತ್ಯ ಪ್ರಕಾಶ್ ಸೇರ್ಪಡೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ರಾಮ ರಾಮ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸತ್ಯ ಪ್ರಕಾಶ್ ಈಗ ಮೂರನೆ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಅದು ಪಿ ಆರ್ ಕೆ ಪ್ರೊಡಕ್ಚನ್ ಮೂಲಕ  ಹ್ಯಾಟ್ರಿಕ್ ಸಾಧನೆ ಮಾಡಲು ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ಸಿನಿಮಾ ಮತ್ತಷ್ಟು ವಿಭಿನ್ನವಾಗಿರಬೇಕೆನ್ನುವ ಕನಸು ಸತ್ಯ ಪ್ರಕಾಶ್ ಅವರದ್ದು. ಅದೇ ಕನಸಿನಲ್ಲಿ ಸ್ಕ್ರಿಪ್ಟ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಎಂದು ಮೂಲಗಳಿಂದ ತಿಳಿದುಬಂದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos