ವಿವಿಧ ಬೇಡಿಕೆಗಳಿಗಾಗಿ ಎಪಿಎಂಸಿ ಅಧಿಕಾರಿಗಳಿಗೆ ಮನವಿ

ವಿವಿಧ ಬೇಡಿಕೆಗಳಿಗಾಗಿ ಎಪಿಎಂಸಿ ಅಧಿಕಾರಿಗಳಿಗೆ ಮನವಿ

ಮಹಾಲಿಂಗಪುರ: ಕೊರೋನಾ ಸಂಕಷ್ಟದಲ್ಲಿರುವ ಮಾರುಕಟ್ಟೆಯ ಹಮಾಲರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಪಿಎಂಸಿ ಹಮಾಲರ ಟ್ರೇಡ್ ಯೂನಿಯನ್ ಅಧ್ಯಕ್ಷ ಪೈಗಂಬರ್ ಪೆಂಡಾರಿ ಅವರ ನೇತೃತ್ವದಲ್ಲಿ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಬಳಿಕ ಮನವಿ ಅರ್ಪಿಸಿ ಮಾತನಾಡಿದ ಅವರು, ಜೀವನಾವಶ್ಯಕ ಹಾಗೂ ಅಗತ್ಯ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುವ ಎಪಿಎಂಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಆರೋಗ್ಯ ಸುರಕ್ಷೆ ವಿಮೆಯನ್ನು ಜಾರಿ ಮಾಡಬೇಕು.
ಆದಾಯವಿಲ್ಲದೆ ಸಮಸ್ಯೆಗೆ ಸಿಲುಕಿರುವ ಹಮಾಲರಿಗೆ ೩ ತಿಂಗಳವರೆಗೆ ಪ್ರತಿ ಹಮಾಲರ ಖಾತೆಗೆ ೧೦.೦೦೦ ಅಲ್ಲದೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶಿಸಿದಂತೆ ಆರು ತಿಂಗಳವರೆಗೆ ೧೦ ಕೆ.ಜಿ ಆಹಾರ ಧಾನ್ಯಗಳನ್ನು ತುರ್ತಾಗಿ ಪೂರೈಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos