ಅಪಘಾತ ಇಬ್ಬರು ದರ್ಮರಣ

ಅಪಘಾತ ಇಬ್ಬರು ದರ್ಮರಣ

ಶ್ರೀರಂಗಪಟ್ಟಣ, ಅ. 3 : ತಾಲೂಕಿನ ಗಣಂಗೂರು ಬಳಿ ಡಿವೈಡರ್ ಹಾರಿದ ಇನ್ನೋವಾ ಕಾರು ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಇಬ್ವರು ಮೃತಪಟ್ಟಿದ್ದಾರೆ. ಮೈಸೂರು ನಗರದ ಮುದಾಸಿರ್ ಅಹಮದ್ ಫರೀದ್ ಅಲಿಯಾಸ್ ವಸೀಮ್ (40 ) ಹಾಗೂ ಚಾಲಕ ತಜಮುಲ್ ರಜ್ಜ್ (40) ಮೃತರು.
ಬಸ್ಸಿನ ಚಾಲಕನನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಯಾಣಿಕರನ್ನು ಬೆರೆ ವ್ಯವಸ್ಥೆ ಮೂಲಕ ಕಳಿಸಲಾಗಿದೆ. ಶವಗಳನ್ನು ಮೈಸೂರಿನ ಕೆ.ಅರ್.ಆಸ್ಪತ್ರೆಗೆ ರವಾನಿಸಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos