ಶ್ರೀರಂಗಪಟ್ಟಣ, ಅ. 3 : ತಾಲೂಕಿನ ಗಣಂಗೂರು ಬಳಿ ಡಿವೈಡರ್ ಹಾರಿದ ಇನ್ನೋವಾ ಕಾರು ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಇಬ್ವರು ಮೃತಪಟ್ಟಿದ್ದಾರೆ. ಮೈಸೂರು ನಗರದ ಮುದಾಸಿರ್ ಅಹಮದ್ ಫರೀದ್ ಅಲಿಯಾಸ್ ವಸೀಮ್ (40 ) ಹಾಗೂ ಚಾಲಕ ತಜಮುಲ್ ರಜ್ಜ್ (40) ಮೃತರು.
ಬಸ್ಸಿನ ಚಾಲಕನನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಯಾಣಿಕರನ್ನು ಬೆರೆ ವ್ಯವಸ್ಥೆ ಮೂಲಕ ಕಳಿಸಲಾಗಿದೆ. ಶವಗಳನ್ನು ಮೈಸೂರಿನ ಕೆ.ಅರ್.ಆಸ್ಪತ್ರೆಗೆ ರವಾನಿಸಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.