ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆ ನ್ಯಾಯ ಕೇಳಲು ಬಂದ ಮಹಿಳೆ ಹಾಗೂ ಯುವತಿಯ ಕುತ್ತಿಗೆ ಹಿಡಿದು ಹೊರದಬ್ಬಿ,ಹಲ್ಲೆ ನಡೆಸಿದ್ದ ಎಎಸ್ ಐ ರೇಣುಕಯ್ಯರನ್ನು ಅಮಾನತು ಮಾಡಲಾಗಿದೆ.
ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಕುಮಾರಸ್ವಾಮಿ ಠಾಣೆ ಎಎಸ್ ಐ ರೇಣುಕಯ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆ ಹಾಗೂ ಯುವತಿಯ ಮೇಲೆ ರೇಣುಕಯ್ಯ ದರ್ಪ ಮೆರೆದಿದ್ದರು.
ಮಹಿಳೆ ಹಾಗೂ ಯುವತಿಯ ಕುತ್ತಿಗೆ ಹಿಡಿದು ಠಾಣೆಯಿಂದ ಹೊರದಬ್ಬಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದರು.