ಹೊಳೆ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿದ ಅನಿತಾಕುಮಾರಸ್ವಾಮಿ

ಹೊಳೆ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿದ ಅನಿತಾಕುಮಾರಸ್ವಾಮಿ

ಮಂಡ್ಯ, ಫೆ.28,ನ್ಯೂಸ್ಎಕ್ಸ್ ಪ್ರೆಸ್:  ತಮ್ಮ ಪುತ್ರ ನಿಖಿಲ್ ರವರು ರಾಜಕೀಯ ಭವಿಷ್ಯದತ್ತ ಚಿಂತಿತರಾಗಿರುವ ಅನಿತಾ ಅವರು ದೇವರುಗಳ ಮೊರೆ ಹೋದರೆ? ಎಂಬ ಸಂಶಯ ಹುಟ್ಟಿಕೊಂಡಿದೆ. ಹಾಗೆ ನೋಡಿದರೆ ಮಂಡ್ಯ ಲೋಕಸಭೆಗೆ ಯಾರು ಸ್ಪರ್ಧಿಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ.

ಈ ಹಿಂದೆ ನಿಖಿಲ್ ಅವರನ್ನು ಕಣಕ್ಕಿಳಿಸುವ ಕುರಿತಂತೆ ಜೆಡಿಎಸ್ ವರಿಷ್ಟರು ತೀರ್ಮಾನ ಮಾಡಿದ್ದರು. ಇದಕ್ಕಾಗಿಯೇ ಕ್ಷೇತ್ರದ ತುಂಬಾ ನಿಖಿಲ್ ರವರ ಓಡಾಟವನ್ನು ಕೂಡ ಮಾಡಿದ್ದರು. ಆದರೆ ಮುಂದಿನ ಬೆಳವಣಿಗೆ ಜೆಡಿಎಸ್ ವರಿಷ್ಠರನ್ನು ಕಂಗಾಲು ಮಾಡಿದೆ.

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆಯಾಗಿರುವುದರಿಂದ ಸುಲಭ ಗೆಲುವು ಸಾಧ್ಯ. ಹೀಗಿರುವಾಗಲೇ ಮೊದಲಿಗೆ ಅಪಸ್ವರ ತೆಗೆದಿದ್ದು, ಕಾಂಗ್ರೆಸ್ನ ಮುಖಂಡ ಮಾಜಿ ಸಚಿವ ಎ.ಮಂಜು. ಮೊದಲಿಗೆ ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಅಥವಾ ಅಭಿಷೇಕ್ ಗೆ ಅವಕಾಶ ಮಾಡಿಕೊಡಿ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಅಂಬರೀಶ್ ಅಭಿಮಾನಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದರು. ದಿನ ಕಳೆದಂತೆ ಸುಮಲತಾ ಅವರ ಮೇಲೆ ಅಭಿಮಾನಿಗಳ ಒತ್ತಡ ಹೆಚ್ಚಾಯಿತು. ತಾನು ರಾಜಕೀಯಕ್ಕೆ ಬರುವ ಇಂಗಿತವನ್ನು ಅವರು ವ್ಯಕ್ತಪಡಿಸಿಯೇ ಬಿಟ್ಟರು. ಇದು ಮಂಡ್ಯದಲ್ಲಿ  ಮಾತ್ರವಲ್ಲ, ರಾಜ್ಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಈಗಲೂ ಸುಮಲತಾ ರವರ ಪಟ್ಟು ಸಡಿಲಿಸದೆ ಇರುವುದರಿಂದ ಮೈತ್ರಿ ನಡುವೆ ಇನ್ನೂ ಕೂಡ ಒಮ್ಮತ ಮೂಡಿದಂತೆ ಕಂಡು ಬಂದಿಲ್ಲ. ಇಲ್ಲಿಂದಲೇ ನಿಖಿಲ್ ಕುಮಾರ್ ಸ್ವಾಮಿ ಅವರು ತಮ್ಮ ರಾಜಕೀಯ ಭವಿಷ್ಯ ಆರಂಭಿಸುವ ಆಲೋಚನೆಯಲ್ಲಿದ್ದು, ಅದು ಕಾರ್ಯರೂಪಕ್ಕೆ ಬರುತ್ತಾ ಎಂಬುದು ಮುಂದೆ ನೋಡಬೆಕು.

ಫ್ರೆಶ್ ನ್ಯೂಸ್

Latest Posts

Featured Videos