ಅತ್ತಿಬೆಲೆ ಸಬ್ ರಿಜಿಸ್ಟಾರ್ ತಿಮ್ಮರೆಡ್ಡಿ ಬಲೆ ಬಿದ್ದ ಅಧಿಕಾರಿ.
1.25 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದ ಅಧಿಕಾರಿ.
ಆನೇಕಲ್ ನ ಚಂದಾಪುರ ಬಳಿ ಇರುವ ಉಪ ನೊಂದಾಣಾಧಿಕಾರಿಗಳ ಕಚೇರಿಯಲ್ಲಿ ಬಲೆಗೆ.
ಕೊರ್ಟ್ ಆದೇಶವನ್ನ ಅಮಾನತು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಿಮ್ಮರೆಡ್ಡಿ.
೨ ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಸಬ್ ರಿಜಿಸ್ಟಾರ್ ತಿಮ್ಮರೆಡ್ಡಿ.
1.25 ಲಕ್ಷ ಮುಂಗಡವಾಗಿ ಪಡೆಯುವಾಗ ಎಸಿಬಿ ಬಲೆಗೆ.
ಎಸಿಬಿ ಕೊದಂಡರಾಮ ನೇತೃತ್ವದಲ್ಲಿ ಕಾರ್ಯಾಚರಣೆ.
ನೆರಳೂರು ಮೂಲದ ಕುಮಾರ್ ಎಂಬುವವರು ದೂರಿನ ಮೇಲೆ ದಾಳಿ.
ಲಂಚ ಸ್ವೀಕರಿಸುವಾಗ ಸಬ್ ರಿಜಿಸ್ಟಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ, ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೊಬಳಿಯ ಸಬ್ ರಿಜಿಸ್ಟಾರ್ ತಿಮ್ಮರೆಡ್ಡಿ ಎಸಿಬಿ ಬಲೆ ಬಿದ್ದ ಅಧಿಕಾರಿ. ಕೋರ್ಟ್ ಆದೇಶವನ್ನ ಅಮಾನತುಗೊಳಿಸಲು ನೆರಳೂರು ಮೂಲದ ಕುಮಾರ್ ಎಂಬುವವರ ಬಳಿ ೨ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಿಮ್ಮರೆಡ್ಡಿ ಮುಂಗಡವಾಗಿ ೧.೨೫ ಲಕ್ಷ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಚಂದಾಪುರ ಬಳಿ ಉಪ ನೊಂದಾಣಾಧಿಕಾರಿಗಳ ಕಚೇರಿಯಲ್ಲಿ ಘಟನೆ ನಡೆದಿದ್ದು ಸಬ್ ರಿಜಿಸ್ಟಾರ್ ತಿಮ್ಮರೆಡ್ಡಿಯನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಆನೇಕಲ್ ತಾಲ್ಲೂಕಿನ ಕಳೆದ ಮೂರು ತಿಂಗಳಲ್ಲಿ ಎಸಿಬಿ ಬಲೆಗೆ ಬಿದ್ದ 4ನೇ ಅಧಿಕಾರಿಯಾಗಿರುವುದು ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.