ಆಣೆ ಪ್ರಮಾಣ ಸರಿಯಲ್ಲ: ಆರ್.ಅಶೋಕ್

ಆಣೆ ಪ್ರಮಾಣ  ಸರಿಯಲ್ಲ: ಆರ್.ಅಶೋಕ್

ಮಡಿಕೇರಿ, ಅ.18 : ಆಣೆ-ಪ್ರಮಾಣವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ದೇವರು ಆಣೆ-ಪ್ರಮಾಣದ ವಿಚಾರಕ್ಕೆ ದೇವರನ್ನು ಮಧ್ಯೆ ತರುವುದು ಒಳ್ಳೆಯದಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ತಲಕಾವೇರಿಯಲ್ಲಿ ನಡೆದ ತೀರ್ಥೋದ್ಭವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕಾಗಿ ದೇವರನ್ನು ಪ್ರದರ್ಶನಕ್ಕೆ ಇಡುವುದು ಒಳ್ಳೆಯದಲ್ಲ.
ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಸಚಿವರಾದ ಸಾ.ರಾ.ಮಹೇಶ್ ಹಾಗೂ ಹೆಚ್.ವಿಶ್ವನಾಥ್ ನಡುವಿನ ಆಣೆ-ಪ್ರಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಆಣೆ-ಪ್ರಮಾಣವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ದೇವರು ದೇವಸ್ಥಾನದಲ್ಲಿ ಪವಿತ್ರವಾಗಿಯೇ ಇರಲಿ. ಯಾರಿಗೂ ಈ ರೀತಿಯ ಆಣೆ-ಪ್ರಮಾಣ ಒಳ್ಳೆಯದಲ್ಲ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos