ಆಂಧ್ರದಲ್ಲಿ ಮತದಾನದ ವೇಳೆ ಇಬ್ಬರ ಬರ್ಬರ ಹತ್ಯೆ 

ಆಂಧ್ರದಲ್ಲಿ ಮತದಾನದ ವೇಳೆ ಇಬ್ಬರ ಬರ್ಬರ ಹತ್ಯೆ 

ಆಂಧ್ರಪ್ರದೇಶ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಆಂಧ್ರಪ್ರದೇಶದಲ್ಲಿ ಮೊದಲ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಕಾದಾಟದಲ್ಲಿ ಇಬ್ಬರ ಹತ್ಯೆಯಾಗಿದೆ. ಮತದಾನದ ವೇಳೆ ಇಬ್ಬರು ಕಾರ್ಯಕರ್ತರ ಬರ್ಬರ ಹತ್ಯೆ ಇಲ್ಲಿನ ಅನಂತಪುರ ಜಿಲ್ಲೆಯ ಪೀಠಾಪುರ ಎಂಬಲ್ಲಿ ಟಿಡಿಪಿ ಮತ್ತು ವೈಎಸ್ ಆರ್ ಸಿಪಿ ಪಕ್ಷದ ಕಾರ್ಯಕರ್ತರ ನಡುವೆ ಕ್ಷುಲ್ಲಕ ವಿಷಯಕ್ಕಾಗಿ ಗಲಾಟೆ ಆರಂಭವಾಗಿತ್ತು. ಅದೇ ವಿಕೋಪಕ್ಕೆ ತಿರುಗಿದ ಕಾರಣ ಭಾಸ್ಕರ ರೆಡ್ಡಿ ಮತ್ತು ಪುಲ್ಲಾರೆಡ್ಡಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos