ಅಂಧ ದಂಪತಿಗಳ ಮಡಿಲು ಸೇರಿದ 8 ತಿಂಗಳ ಮಗು

ಅಂಧ ದಂಪತಿಗಳ ಮಡಿಲು ಸೇರಿದ 8 ತಿಂಗಳ ಮಗು

ಬೆಂಗಳೂರು, ಏ. 30, ನ್ಯೂಸ್ ಎಕ್ಸ್ ಪ್ರೆಸ್: ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಿಂದ ಅಪಹರಣವಾಗಿದ್ದ ಮಗು ಪೋಷಕರ ಮಡಿಲು ಸೇರಿದೆ. ರಾಯಚೂರಿನ ಅಂಧ ದಂಪತಿ ಬಸವರಾಜು ಮತ್ತು ಚಿನ್ನು ಅವರ 8 ತಿಂಗಳ ಮುದ್ದಾದ ಗಂಡುಮಗು ಸಾಗರ್ ನನ್ನು ಅಪರಿಚಿತ ಮಹಿಳೆ ನೀರು ಕುಡಿಸುವ ನೆಪದಲ್ಲಿ ಅಪಹರಿಸಿದ್ದು, ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಮಗು ಅಪಹರಣವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಕೆಂಗೇರಿ ಬಳಿ ಮಗುವನ್ನು ಬಿಟ್ಟು ಮಹಿಳೆ ಪರಾರಿಯಾಗಿದ್ದಾಳೆ. ಬಳಿಕ ಸಾರ್ವಜನಿಕರು ಮಗುವನ್ನು ಠಾಣೆಗೆ ತಂದು ಒಪ್ಪಿಸಿದ್ದಾರೆ ಎನ್ನಲಾಗಿದೆ. ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದ್ದು, ಅಪಹರಣದ ಬಗ್ಗೆ ಪೊಲೀಸ್ ತನಿಖೆ ಮುಂದುವರಿಸಲಾಗಿದೆ. ರಾಯಚೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ ದಂಪತಿ ಬಸ್ ನಿಲ್ದಾಣದಲ್ಲಿ ಮಗುವಿಗೆ ನೀರು ಕುಡಿಸುತ್ತಿದ್ದ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ಬಂದ ಮಹಿಳೆ, ಮಗುವನ್ನು ಅಪಹರಿಸಿದ್ದಳು. ಮಗುವನ್ನು ಕಳೆದುಕೊಂಡ ದಂಪತಿ ಕಣ್ಣೀರಿಟ್ಟಿದ್ದರು. ಈ ಪ್ರಕರಣ ಸುಖಾಂತ್ಯ ಕಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos