ಮೈಸೂರು, ಅ. 9 : ಜಂಬೂ ಸವಾರಿ ಮುಗಿಸಿದ ಗಜ ಪಡೆಗಳು ಫುಲ್ ರೆಸ್ಟ್ ನಲ್ಲಿ ಇವೆ. ಮಾವುತರು, ಕಾವಾಡಿಗಳು ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಗಜಪಡೆ ನಾಯಕ ಅರ್ಜುನ, ಬಲರಾಮ ಸಹಿತ ಎಲ್ಲಾ ಆನೆಗಳು ವಿಶ್ರಾಂತಿ ಪಡೆಯುತ್ತಿದ್ದು, ಆನೆಗಳಿಗೆ ಮಾವುತರು ಸ್ನಾನ ಮಾಡಿಸಿ, ಗಜಪಡೆಗಳ ಜೊತೆ ಮಾವುತರು, ಕಾವಾಡಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.
ಮತ್ತೆ ಅರಮನೆಯಿಂದ ಕಾಡಿಗೆ ತೆರಳಲಿದೆ. ಮಂಗಳವಾರ ನಡೆದ ಅದ್ಧೂರಿ ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿ ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾ ಯಶಸ್ವಿಯಾಗಿದ್ದಾನೆ.