ಅಮರನಾಥ ಯಾತ್ರೆ : ನಾಲ್ವರು ಸಾವು

ಅಮರನಾಥ ಯಾತ್ರೆ : ನಾಲ್ವರು ಸಾವು

ಶ್ರೀನಗರ, ಜು. 25 : ಅಮರನಾಥ ಯಾತ್ರೆ ವೇಳೆ ಕಳೆದ 24 ಗಂಟೆಗಳಲ್ಲಿ ನಾಲ್ವರು ಯಾತ್ರಿಕರು ಮೃತಪಟ್ಟಿದ್ದಾರೆ. ಈ ವರ್ಷದ ಅಮರನಾಥ ಯಾತ್ರೆಯಲ್ಲಿ ಸತ್ತವರ ಸಂಖ್ಯೆ 30ಕ್ಕೆ ಏರಿದೆ.
ಅಮರನಾಥ ಯಾತ್ರೆ ಮಾರ್ಗದಲ್ಲಿ ನಿನ್ನೆ ವಿವಿಧ ಕಾರಣಗಳಿಂದ ಮೂವರು ಮೃತಪಟ್ಟಿದ್ದರು. ಇಂದು ಬೆಳಗ್ಗೆ ಮತ್ತೊಬ್ಬ ಯಾತ್ರಿಕರು ಅನಾರೋಗ್ಯದಿಂದ ಅಸುನೀಗಿದರು. ಈ ವರ್ಷ ಅಮರನಾಥ ಯಾತ್ರೆ ಸಂದರ್ಭದಲ್ಲಿ ಈವರೆಗೆ 30 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos