“ಅಳುಬುರುಕ ಸಿಎಂ ಹೆಚ್.ಡಿ.ಕೆ.”: ಶಿವರಾಜ್ ಸಿಂಗ್ ಚೌಹಾಣ್

“ಅಳುಬುರುಕ ಸಿಎಂ ಹೆಚ್.ಡಿ.ಕೆ.”: ಶಿವರಾಜ್ ಸಿಂಗ್ ಚೌಹಾಣ್

ಬೀದರ್, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕುವ ಅಳುಬುರಕ ಸಿಎಂ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ್​ ಬೀದರ್​ನಲ್ಲಿ ವ್ಯಂಗ್ಯವಾಡಿದ್ದಾರೆ. ಸದಾ ಕಣ್ಣೀರು ಹಾಕುವ ಅಳುಬುರಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ್​ ವ್ಯಂಗ್ಯವಾಡಿದ್ದಾರೆ. ಬೀದರ್ ಲೋಕಸಭೆ ಕ್ಷೇತ್ರದ ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸದಾ ಕಣ್ಣೀರು ಹಾಕುತ್ತ ಅಸಹಾಯಕರಂತೆ ಅಳುತ್ತಾ ಜನರ ಮುಂದೆ ಬರುವ ನಾ ಕಂಡ ದೇಶದ ಅಸಹಾಯಕ ಸಿಎಂ ಕುಮಾರಸ್ವಾಮಿ ಎಂದರು. ಕೆಲಸ ಮಾಡಲಿಕ್ಕಾಗ್ತಿಲ್ಲ ಎಂದರೆ ಅಧಿಕಾರ ಬಿಟ್ಟು ಹೋಗಬೇಕು. ಹೆಚ್​​​​ಡಿಕೆ ಅವರ ಈ ಧೋರಣೆಯಿಂದ ಕರ್ನಾಟಕ ಅಭಿವೃದ್ಧಿ ಆಳವಾದ ಕಂದಕದಲ್ಲಿ ಬಿದ್ದಂತಾಗಿದೆ ಎಂದರು. ಚೌಕಿದಾರ ಚೋರ್ ಹೈ ಎಂಬ ರಾಹುಲ್ ಗಾಂಧಿ ಹೇಳಿಕೆ ನಿಜಕ್ಕೂ ಅವರಿಗೆ ಶೋಭೆ ತರುವಂಥದ್ದಲ್ಲ. ಆಕಾಶಕ್ಕೆ ಮುಖ ಮಾಡಿ ಉಗುಳುವ ರಾಹುಲ್ ಗಾಂಧಿ ಅವರ ಮುಖದ ಮೇಲೆ ಆ ಉಗುಳು ಬೀಳಲಿದೆ ಎಂಬುದನ್ನು ಮರೆತ್ತಿದ್ದಾರೆ ಎಂದರು. ಮಧ್ಯಪ್ರದೇಶದಲ್ಲಿ ಕೂಡ ಅಲ್ಪ ಸಂಖ್ಯೆಯಲ್ಲೆ ಅಧಿಕಾರದಿಂದ ದೂರ ಉಳಿಯಬೇಕಾಯ್ತು. ಕರ್ನಾಟಕದಲ್ಲಿ 37 ಸ್ಥಾನ ಬಲದ ಜೆಡಿಎಸ್ ಮುಖ್ಯಮಂತ್ರಿ ಗದ್ದುಗೆ ಹಿಡಿಯುತ್ತದೆ ಅಂದ್ರೆ ಈ ಭಾಗದ ಅಭಿವೃದ್ಧಿ ಹೇಗೆ ಸಾಧ್ಯ.

ಫ್ರೆಶ್ ನ್ಯೂಸ್

Latest Posts

Featured Videos