ಬೆಂಗಳೂರು, ಡಿ. 16: ಕೆಲವು ದಿನಗಳಿಂದ ರಾಜ್ಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಹೌದು, ಈಗ ಈರುಳ್ಳಿ ಜೊತೆ ಇನ್ನಿತರ ತರಕಾರಿಯ ಬೆಲೆ ಕೂಡ ಜಾಸ್ತಿಯಾಗಿದೆ. ತರಕಾರಿ ಕೊಳ್ಳುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಬಟಾಣಿ ಮತ್ತು ಟೊಮೆಟೋ ಹೊರತುಪಡಿಸಿದರೆ ಬೆಂಡೆಕಾಯಿ , ತೊಂಡೆಕಾಯಿ, ಬೀನ್ಸ್, ಕ್ಯಾರೆಟ್, ಗೋರಿಕಾಯಿ, ಬೀಟ್ರೂಟ್, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಸೇರಿದಂತೆ ಬಹುತೇಕ ತರಕಾರಿಗಳ ದರದಲ್ಲಿ ಏರಿಕೆಯಾಗಿದೆ.
ಬಟಾಣಿ ಮಾತ್ರ ಕೆಜಿಗೆ 40-50 ರೂ. ಟೊಮೆಟೋ ಕೆಜಿ 20 ರೂ.ಗೆ ಖರೀದಿಯಾಗುತ್ತಿವೆ. ಕೆಲ ದಿನಗಳಿಂದ ಬಹುಬೇಡಿಕೆ ಇದ್ದ ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 60ರೂ.ನಿಂದ 100 ರೂ. ನಿಗದಿಯಾಗಿದೆ. ವಿವಿಧ ಸೊಪ್ಪುಗಳ ದರದಲ್ಲಿ ಇಳಿಕೆಯಾಗಿದ್ದರೆ, ಸಬ್ಬಕ್ಕಿ ಸೊಪ್ಪು ಪೂರೈಕೆ ಇಲ್ಲದೆ ಬೆಲೆ ಗಗನಕ್ಕೇರಿದೆ.