ದಾವಣಗೆರೆ, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ಸಂಸದ ಸಿದ್ದೇಶ್ವರ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಡುವೆ ಒಂದೇ ವೇದಿಕೆಯಲ್ಲಿ ಮಾತಿನ ಚಕಮಕಿ ನಡೆದ ಘಟನೆ ಇಂದು ನಡೆಯಿತು.
ಇಂದು ನಗರದ ಹಳೆ ಬಸ್ ನಿಲ್ದಾಣದ ಪುನರ್ ಅಭಿವೃದ್ಧಿ ಕಾಮಗಾರಿ ವೇಳೆ ಜಿಲ್ಲೆಗೆ ತಂದ ಅನುದಾನದ ಬಗ್ಗೆ ಶಾಮನೂರು ಅವರು ಮಾತನಾಡಲು ಶುರು ಮಾಡಿದರು, ಆದರೆ ಅದಕ್ಕೆ ಇದು ಮೋದಿಯವರು ಕೂಡ ನೀಡಿದ್ದಾರೆ ಅಂತ ಹೇಳಿದರು.
ಅದಕ್ಕೆ ಶಾಮನೂರು ಅವರು ಬರೀ ಮೋದಿಯವರದ್ದೇ ಹೇಳಬೇಡಿ, ನೀವು ಮಾಡಿದನ್ನು ಹೇಳಿ ಅಂತ ಹೇಳಿದರು, ಅದಕ್ಕೆ ಸಿದ್ದೇಶ್ವರ್ ಅವರು ನಮ್ಮ ನಾಯಕರ ಸಾಧನೆ ಬಗ್ಗೆ ನಾವು ಮಾತನಾಡಿದರೇ ತಪ್ಪೇನು ಅಂತ ಪ್ರಶ್ನೆ ಮಾಡಿದರು. ಇದೇ ವೇಳೆ ಶಾಮನೂರು ಅವರಿಗೆ ಸಿದ್ದೇಶ್ವರ್ ದಾವಣಗೆರೆ ಅಂದ್ರೆ ಬರೀ ಶಾಮನೂರು ಶಿವಶಂಕರಪ್ಪ ಮತ್ತು ಮಕ್ಕಳು ಅಷ್ಟೇ ಎಂದು ಕಿಡಿಕಾರಿದರು.