ಬೆಂಗಳೂರು, ಜು. 16 : ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ತನಿಖಾಧಿಕಾರಿಗಳು ಸಂಸದ ಡಿ.ಕೆ. ಸುರೇಶ್ ವಿರುದ್ದ ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳನ್ನು ವಿಶೇಷ ನ್ಯಾಯಾಲಯ ತಿರಸ್ಕರಿದೆ.
ಕನಕಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಸಂಸದ ಡಿ. ಕೆ ಸುರೇಶ್ ವಿರುದ್ಧ ತನಿಖಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಸಂಸದ ಸುರೇಶ್ ವಿರುದ್ಧ ಕೇಸನ್ನು ಕೈಬಿಟ್ಟಿರುವುದಲ್ಲದೆ ದಾವೆಯ ವಿಚಾರಣೆಯನ್ನು ಕೈ ಬಿಟ್ಟಿದೆ.
ಸಂಸದ ಡಿ.ಕೆ.ಸುರೇಶ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಹನ್ನೊಂದು ವರ್ಷ ಎರಡು ತಿಂಗಳಿಗೂ ಹೆಚ್ಚು ಸಮಯ ವಿಳಂಬವಾಗಿತ್ತು. ಹಾಗು ಎರಡನೆ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಮೂರು ವರ್ಷ ಹನ್ನೊಂದು ತಿಂಗಳು ವಿಳಂಬವಾಗಿದೆ ಎಂದು ಸಂಸದ ಸುರೇಶ್ ಪರ ವಕೀಲರು ವಾದ ಮಂಡಿಸಿದ್ದರು.