ಮಂಗಳೂರು, ಜು. 9: ಅಕ್ರಮ ಗೋಸಾಗಾಟ ಶಂಕೆ ಮೇಲೆ ತಲ್ವಾರು ದಾಳಿ ನಡೆಸಿದ್ದ ರೌಡಿ ಶೀಟರ್ ಬಂಧನಕ್ಕೆ ತೆರಳಿದ್ದ ವೇಳೆ ಸ್ವರಕ್ಷಣೆಗಾಗಿ ಫೈರಿಂಗ್ ನಡೆಸಿದ ಘಟನೆ ಮಂಗಳೂರು ಸಮೀಪದ ಅಡ್ಯಾರುವಿನಲ್ಲಿ ನಡೆದಿದೆ. ರೌಡಿ ಶೀಟರ್ ಭವಿತ್ ರಾಜ ಎನ್ನುವ ಬಂಧಿಸಲು ತೆರಳಿದ್ದ ಪೋಲೀಸರ ಮೇಲೆ ಆತ ಹಲ್ಲೆಗೆ ಮುಂದಾಗಿದ್ದಾನೆ. ಸ್ವರಕ್ಷಣೆಗಾಗಿ ಕಂಕನಾಡಿ ಠಾಣಾಧಿಕಾರಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ.
ರೌಡಿ ಶೀಟರ್ ಭವಿತ್ ರಾಜ್ ಮೇಲೆ ಕಂಕನಾಡಿ ಪೋಲೀಸ್ ಠಾಣೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿದೆ. ಇಂದಿನ ಫೈರಿಂಗ್ ಘತಾನೆ ಕುರಿತಂತೆ ಮಂಗಳೂರು ನಗರ ಪೋಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾದ್ಯಮಗಳಿಗೆ ಮಾಹಿತಿ ತಿಳಿಸಿದರು.