ಏರ್ ಶೋ ದುರಂತ: ಕಾರಿನ ಮಾಲೀಕರಿಗೆ ಚೆಕ್ ವಿತರಣೆ

ಏರ್ ಶೋ ದುರಂತ: ಕಾರಿನ ಮಾಲೀಕರಿಗೆ ಚೆಕ್ ವಿತರಣೆ

ಬೆಂಗಳೂರು, ಮಾ.6, ನ್ಯೂಸ್ಎಕ್ಸ್ ಪ್ರೆಸ್‍:  ಯಲಹಂಕದಲ್ಲಿ ನಡೆದ ಏರ್ ಶೋ ವೇಳೆ ಕಾರು ಸುಟ್ಟು ಹೋಗಿರುವ ಮಾಲೀಕರಿಗೆ ಸಿಎಂ ಪರಿಹಾರ ನಿಧಿಯಿಂದ ಸಹಾಯ ಮಾಡುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರಿಗೆ ಕೆಲವರಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಇನ್ಶ್ಯೂರೆನ್ಸ್ ಇಲ್ಲದವರಿಗೆ ಪರಿಹಾರ ನೀಡುವುದಕ್ಕೆ ಸಿಎಂ ಕುಮಾರಸ್ವಾಮಿ ಅವರು ಒಪ್ಪಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋ ವೇಳೆ 277 ಕಾರುಗಳು ಸುಟ್ಟುಹೋಗಿದ್ದವು. 251 ಕಾರುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇವುಗಳಲ್ಲಿ 60 ವಾಹನಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ. 26 ಕಾರುಗಳು ಅರ್ಧ ಸುಟ್ಟು ಹೋಗಿವೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos