ಬೆಂಗಳೂರು: ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ
ನಲ್ಲಿ ಆಕಸ್ಮಿಕ ಅಗ್ನಿ ಅವಘಡ
ಸಂಭವಿಸಿದ್ದು, ಬರೋಬ್ಬರಿ 300 ಕ್ಕೂ ಹೆಚ್ಚು ಕಾರುಗಳು
ಸುಟ್ಟು ಭಸ್ಮವಾಗಿವೆ.
ಆಗಸದಲ್ಲಿ
ವಿಮಾನಗಳ ಕಸರತ್ತು ನೋಡಲು ಬಂದ
ಜನರ ಕಾರುಗಳು ಬೆಂಕಿಗಾಹುತಿಯಾಗಿದ್ದು, ಜನರು ಕಂಗಾಲಾಗಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳನ್ನು ಕಳೆದುಕೊಂಡ ಕೇಂದ್ರ ನಾಳೆ ರಜಾ ದಿನವಾದ ಭಾನುವಾರ ಕೂಡ ಕೆಲಸ ಮಾಡಲಿದ್ದು, ವಾಹನಗಳ ಮಾಲೀಕರಿಗೆ ವಿಶೇಷ ನೆರವು ನೀಡಲು ಮುಂದಾಗಿದೆ. ಸಾರಿಗೆ ಇಲಾಖೆ ವತಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿ ಯಲಹಂಕದಲ್ಲಿ ಸಹಾಯ ಕೇಂದ್ರ ಪ್ರಾರಂಭಿಸಲಾಗಿದ್ದು, ವಾಹನಗಳ ಮಾಲೀಕರಿಗೆ ವಿಶೇಷ ನೆರವು ನೀಡಲಿದೆ.