ಬೆಂಗಳೂರು, ಮೇ. 14, ನ್ಯೂಸ್ ಎಕ್ಸ್ ಪ್ರೆಸ್: 2012 ರಲ್ಲಿ ತೆರೆಕಂಡ ಅದ್ದೂರಿ ಚಿತ್ರದ ಮೂಲಕ ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು. ‘ಅದ್ದೂರಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಶಂಕರ್ ರೆಡ್ಡಿ ಇದೀಗ ಮತ್ತೊಂದು ‘ಅದ್ದೂರಿ-2’ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಶೇಷವೆಂದರೆ, ಚಿತ್ರಕ್ಕೆ ನಾಯಕನಟರಾಗಿ ಧ್ರುವ ಬದಲಿಗೆ ರಿಯಲ್ ಸ್ಟಾರ್ ಉಪೇಂದ್ರರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟಿಸುತ್ತಿದ್ದಾರೆ.
‘ಅದ್ದೂರಿ’ ಚಿತ್ರಕ್ಕೆ ಎ.ಪಿ ಅರ್ಜುನ್ ಅ್ಯಕ್ಷನ್ ಕಟ್ ಹೇಳಿದ್ರು. ಆದರೆ ಇದೀಗ ನಿರ್ದೇಶಕರು ಬದಲಾಗಿದ್ದು, ನವ ನಿರ್ದೇಶಕ ವೆಂಕಟೇಶ್ ಚಿತ್ರ ನಿರ್ದೇಶನದ ಹೊಣೆ ಹೊತ್ಕೊಂಡಿದ್ದಾರೆ. ‘ಅದ್ದೂರಿ-2’ ವಿಭಿನ್ನವಾದ ಕಥೆಯಾಗಿದ್ದು, ಸದ್ಯ ನಿರಂಜನ್ ‘ನಮ್ ಹುಡುಗರು ಕಥೆ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆಲ್ಮೋಸ್ಟ್ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿಯುವ ಹಂತಕ್ಕೆ ಬಂದಿದ್ದು ಮುಂದಿನ ತಿಂಗಳು ಚಿತ್ರ ಸೆಟ್ಟೇರೋ ಸಾಧ್ಯತೆ ಇದೆ.