ಆನೇಕಲ್, ಜ. 06: ತಮಿಳುನಾಡಿನಲ್ಲಿ ಗಾಂಜಾ ಸೇವಿಸುತ್ತಿದ್ದ ಆರೋಪಿಗಳನ್ನ ಬಂಧಿಸಲು ಹೋದ ಪೊಲೀಸ್ ಮೇಲೆ ಗಾಂಜ ವ್ಯಸನಿಗಳು ಅತಿರೇಕದ ವರ್ತನೆ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಚೆನೈನ ತಾಂಬರಮ್ ಭಾಗದಲ್ಲಿ ಗಾಂಜ ವೆಸನಿಗಳ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಜೈಲು ಸೇರಿ ಇತ್ತಿಚಿಗೆ ಜೈಲಿನಿಂದ ಹೊರ ಬಂದ ಆರೋಪಿಗಳಿಂದ ಕೃತ್ಯ ನಡೆಸಿದ್ದಾರೆಂದು ತಿಳಿದುಬಂದಿದೆ.
ಮಪ್ತಿಯಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಆರೋಪಿಗಳು ವೈರಲ್ ಮಾಡಿದ್ದಾರೆ. ದರೋಡೆಗೆ ಯತ್ನಿಸಿದವರನ್ನು ಹಿಡಿಯಲು ಬಂದಿದ್ದ ಪೊಲೀಸರಿಗೆ ಭಯವನ್ನು ಇಡುತ್ತಿದ್ದೆವೆಂದು ದುಷ್ಕರ್ಮಿಗಳು ಮಾತನಾಡುತ್ತಿರುವು ಅವರ ಮಾತನಾಡುತ್ತಿರುವುದು ತಿಳಿದುಬಂದಿದೆ. ಆರೋಪಿಗಳ ಬಗ್ಗೆ ತಮಿಳುನಾಡು ಪೊಲೀಸರು ಏನು ಕ್ರಮಕೈಗೊಂಡಿದ್ದಾರೆಂದು ತಿಳಿದುಬಂದಿಲ್ಲ.