ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಭೀಕರ ಅಪಘಾತ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ನೆಲಮಂಗಲ ತಾಲೂಕಿನ ತನಚಿನ ಗುಪ್ಪೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಐದು ಖಾಸಗಿ ಬಸ್ ಗಳು ನಡುವೆ ಈ ಅಪಘಾತ ನಡೆದಿದೆ. ಒಂದಲ್ಲ ಎರಡಲ್ಲ ಐದು ಖಾಸಗಿ ಬಸ್ಗಳ ನಡುವೆ ಈ ಅಪಘಾತ ನಡೆದಿರುವುದು. ಸಂಪೂರ್ಣವಾಗಿ ಆ ಭಾಗದಲ್ಲಿ ಮಂಜು ಕವಿದಿದ್ದರಿಂದ ರಸ್ತೆ ಸರಿಯಾಗಿ ಕಾಣದೆ ಈ ಅಪಘಾತ ಆಗಿದೆ. ಗಾಡಿಗಳೆಲ್ಲ ಸಂಪೂರ್ಣವಾಗಿ ಜಖಂ ಆಗಿದೆ. ಸಾಕಷ್ಟು ಜನಗಳಿಗೆ ಗಾಯಗಳಾಗಿವೆ. ಸುಮಾರು 25 ಹೆಚ್ಚು ಜನರಿಗೆ ಗಾಯಗಳಾಗಿವೆ. ಮತ್ತೆ ಒಂದಕ್ಕೊಂದು ಬಸ್ ಗಳು ಅಪ್ಪಚಿ ಆಗಿರುವುದರಿಂದ ಒಳಗೆ ಸಿಲುಕಿರುವಂತಹ ಜನರನ್ನು ಆಚೆತರುವುದು ಕೂಡ ದೊಡ್ಡ ಸಾಹಸವಾಗಿದೆ.