ಸರಣಿ ಅಪಘಾತ

ಸರಣಿ ಅಪಘಾತ

  

ಕೆ.ಆರ್.ಪುರ, ಜು. 31: ಎಚ್ಎಎಲ್ ಸಮೀಪ ಮಂಗಳವಾವ ರಾತ್ರಿ ಬ್ರೇಕ್ ವಿಫಲವಾಗಿ ನಿಯಂತ್ರಣ ಕಳೆದುಕೊಂಡ ಬಿಎಂಟಿಸಿ ಬಸ್, 1 ಬೈಕ್ ಮತ್ತು 2 ಕಾರುಗಳಿಗೆ ಡಿಕ್ಕಿ  ಹೊಡೆದಿದ್ದರಿಂದ 6 ಜನರಿಗೆ ಗಾಯವಾಗಿದೆ. ಕಾರಿನಲ್ಲಿದ್ದ ಮಹಿಳೆ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದ ಬಳಿಕ ಸಂಚಾರಿ ಪೊಲೀಸರು 15 ನಿಮಿಷಗಳಲ್ಲಿ ಬಸ್ ಬಿಎಂಟಿಸಿ ತೆರವು ಮಾಡಿದರು. ಅಷ್ಟೊತ್ತಿಗೆ 2 ಕಿಲೋ ಮೀಟರ್ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದೇ ಮಾರ್ಗದಲ್ಲಿ ಹೊರಟಿದ್ದ ಶಾಸಕ ಅರವಿಂದ ಲಿಂಬಾವಳಿ ರಸ್ತೆಗಿಳಿದು ಸಂಚಾರ ದಟ್ಟಣೆ ನಿವಾರಣೆಗೆ ಸಹಕರಿಸಿದರು. ಈ ಬಗ್ಗೆ ಅವರು ತನ್ನ ಟ್ವಿಟರ್ನಲ್ಲು ಟ್ವಿಟ್ ಮಾಡಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos