ಬೆಂಗಳೂರು, ಜು. 9 :
ನಗರದಲ್ಲಿ ಇಂದು ಬೆಳಿಗ್ಗೆ ಎರಡು ಬಸ್ ಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ನಾಲ್ಕು ಜನ ಪ್ರಯಾಣಿಕರಿಕೆ ಗಂಭೀರ ಗಾಯವಾಗಿದೆ. ಈ ಘಟನೆ ಬನ್ನೇರುಘಟ್ಟ ರಸ್ತೆಯ ಜಂಗಲ್ ಪಾಳ್ಯ ಬಳಿ ನಡೆದಿದೆ.
ರಾಯನ್ ಇಂಟರ್ ನ್ಯಾಷನಲ್ ಶಾಲಾ ಬಸ್ ಗೂ ಖಾಸಗಿ ಗಾರ್ಮೆಂಟ್ಸ್ ಬಸ್ ಗೆ ಡಿಕ್ಕಿ ಹೊಡೆದಿದೆ.
ಬನ್ನೇರುಘಟ್ಟದಲ್ಲಿ ಇರುವ ಗಾರ್ಮೆನ್ಸ್ ಗೆ ಹೋಗುವಾಗ ಈ ಘಟನೆ ನಡೆದೆ. ಗಾರ್ಮೆಂಟ್ಸ್ ಚಾಲಕನ ಕಾಲು ಮುರಿದು ಪರಿಣಾಮಾ ಆತನ್ನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶಾಲೆಯ ಬಸ್ ನಲ್ಲಿ ಇದ್ದ ಚಾಲಕ ಮತ್ತು ಒಬ್ಬ ಮಹಿಳೆ ಹಾಗೂ ಒಂದು ಮಗುವಿಗೆ ಗಾಯವಾಗಿದೆ.
ಬನ್ನೇರುಘಟ್ಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಬನ್ನೇರುಘಟ್ಟ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳ ರವಾನಿಸಲಾಗಿದೆ.