ಎಸಿಬಿ ರೈಡ್

  • In Crime
  • December 11, 2018
  • 244 Views
ಎಸಿಬಿ ರೈಡ್

ದಿನಾಂಕ-10-12-18

ಪ್ರತಿನಿಧಿ-ಪುನೀತ್.ಡಿ-ಆನೇಕಲ್

———————————
40 ಸಾವಿರ ಲಂಚ ಪಡೆಯುವಾಗ ಆನೇಕಲ್ ತಾಲ್ಲೂಕು ಕಚೇರಿಯ ದ್ವೀತಿಯ ದರ್ಜೆ ಗುಮಾಸ್ತ ಹಾಗೂ ಮಧ್ಯವರ್ತಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸ್,ಡಿ.ಎ ಕೃಷ್ಣಮೂರ್ತಿ ಹಾಗೂ ಮಧ್ಯವರ್ತಿ ಆನಂದ್ ಎಂಬುವವರು ಬಲೆಗೆ ಬಿದ್ದವರು, ಆನೇಕಲ್ ತಾಲ್ಲೂಕಿನ ಮಾರ್ಗೊಂಡಹಳ್ಳಿ ಜಮೀನು ಸಂಬಂದ ಖಾತೆ ಮಾಡಿಸಲು ಕೋಲಾರ ಮೂಲಕ ಶಿವರಾಜ್ ಕುಮಾರ್ ಎಂಬುವವರ ಬಳಿ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕೃಷ್ಣಮೂರ್ತಿ ಇಂದು ಅವರಿಂದ ಮುಂಗಡವಾಗಿ 40 ಸಾವಿರ ಲಂಚ ಸ್ವೀಕರಿಸುವ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ, ಇಬ್ಬರನ್ನ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ಸುಮಾರು 4 ಗಂಟೆ ಕಾಲ ವಿಚಾರಣೆ ನಡೆಸಿ ಅವರನ್ನ ಬಂದಿಸಿದರು. ಗುಮಾಸ್ತ ಕೃಷ್ಣಮೂರ್ತಿ ಯಾರಿಗೂ ತಿಳಿಯದ ಹಾಗೆ ಮಧ್ಯವರ್ತಿ ಮೂಲಕ ವ್ಯವಹಾರ ಮಾಡಿಸುತ್ತಿದ್ದ, ಈ ಸಂಬಂದ ದೂರು ಪಡೆದ ಎಸಿಬಿ ಅಧಿಕಾರಿಗಳು ಇಬ್ಬರನ್ನ ಸಹ ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಎಸಿಬಿ ಡಿವೈಎಸ್‍ಪಿ ಕೊದಂಡರಾಮ್ ದಾಳಿಯ ನೇತೃತ್ವ ವಹಿಸಿಕೊಂಡಿದ್ದರು

ಫ್ರೆಶ್ ನ್ಯೂಸ್

Latest Posts

Featured Videos