ಬೆಂಗಳೂರು:
ನಗರಾದ್ಯಂತ ಪೌರ ಕಾರ್ಮಿಕರ ಪಿಎಫ್, ಇಎಸ್ ಐ ಹಣ ಅವ್ಯವಹಾರ ಸಂಬಂಧ ದಾಳಿ ಮಾಡಿರುವ ಎಸಿಬಿ, ಬೊಮ್ಮನಹಳ್ಳಿ ಬಿಬಿಎಂಪಿ ವಲಯ ಕಚೇರಿ ಮೇಲೆಯೂ
ಸಹ ಎಸಿಬಿ ದಾಳಿ
ನಡೆಸಿದೆ.
ನಗರಾದ್ಯಂತ ಪೌರ ಕಾರ್ಮಿಕರ ಹೆಸರಲ್ಲಿ ನಕಲಿ ಮಂಜೂರಾತಿ ಸಂಬಂಧ ದಾಳಿ ನಡೆದಿದೆ. ಪೌರ ಕಾರ್ಮಿಕರ ಪಿಎಪ್ ಹಾಗೂ ಇಎಸ್ ಐ ನಲ್ಲಿ 384 ಕೋಟಿ 6 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರ ಹೆಸರಲ್ಲಿ 500 ಕೋಟಿಗೂ ಅಧಿಕ ಹಣ ಮಂಜೂರಾಗಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನಲೆ ನಗರದ ಎಲ್ಲ ವಲಯ ಬಿಬಿಎಂಪಿ ಕಚೇರಿಗಳಿಗೂ ಎಸಿಬಿ ಮಾಹಿತಿ ಕೇಳಿತ್ತು.
ಆದರೆ ಬೊಮ್ಮನಹಳ್ಳಿ ವಲಯದಿಂದ ಸಮರ್ಪಕ ಮಾಹಿತಿ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಎಸಿಬಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ
ನಡೆಸಿದ್ದಾರೆ. ಇಂದು ಬೆಳಗ್ಗೆ ಬಿಬಿಎಂಪಿ ಕಚೇರಿ ಆರಂಭವಾಗುತ್ತಿದ್ದಂತೆ ಎಸಿಬಿ ದಾಳಿ
ನಡೆಸಿದೆ.