ಬೆಂಗಳೂರು: ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇಂದು ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದರು.
ಏಪ್ರಿಲ್ 3 ರಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಘೋಷಣೆ ಮಾಡಿದಾಗ ಅವರ ಪಕ್ಕದಲ್ಲೇ ನಿಂತಿದ್ದ ಮಗ ಅಭಿಷೇಕ್ ಅಂಬರೀಶ್ ಮತ್ತು ಸಂಸದೆಯನ್ನು ಸ್ವಂತ ತಾಯಿಯಷ್ಟೇ ಗೌರವಿಸುವ ನಟ ದರ್ಶನ್ ಸಂತಸ ವ್ಯಕ್ತಪಡಿಸದೆ ಸ್ಥಿತ ಪ್ರಜ್ಞರಂತಿದ್ದರು. ಆದರೆ ಇಂದು ನಗರದಲ್ಲಿ ಅವರು ತಾಯಿಯ ನಿರ್ಧಾರ ಅವರಲ್ಲಿ ಬೇಸರವೇನೂ ಹುಟ್ಟಿಸಿಲ್ಲ.
ಒಬ್ಬ ಮಗ ತನ್ನ ತಾಯಿಗೆ ಸಪೋರ್ಟ್ ಮಾಡವ ಹಾಗೆ ಅಮ್ಮನ ಎಲ್ಲ ನಿರ್ಧಾರಗಳಿಗೆ ಬೆಂಗಾವಲಾಗಿ ನಿಲ್ಲುವ ಮಾತನ್ನು ಅವರು ಹೇಳಿದರು. ಕುಮಾರಸ್ವಾಮಿಯವರ ಪ್ರಚಾರ ಮಾಡುವ ಬಗ್ಗೆ ಕೇಳಿದಾಗ ಸಿಡುಕಿದ ಅಭಿಷೇಕ್, ರಾಜಕೀಯದಲ್ಲಿ ಅಂಥ ಸಂಗತಿಗಳೆಲ್ಲ ನಡೆಯುತ್ತಿರುತ್ತವೆ, ಇಲ್ಲಿ ಯಾರೂ ವೈರಿಗಳಲ್ಲ ಸ್ನೇಹಿತರೂ ಅಲ್ಲ, ಕುಮಾರಸ್ವಾಮಿಯರು ಮನೆಗೂ ಬಂದಿದ್ದರು, ದೇಶಕ್ಕೆ ಮತ್ತು ಜಿಲ್ಲೆಗೆ ಒಳ್ಳೆಯದಾಗಬೇಕು ಅನ್ನೋದಷ್ಟೇ ತಮ್ಮ ಉದ್ದೇಶ ಎಂದರು.