ಇಸ್ಲಾಮಾಬಾದ್, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: ಎಬಿಡಿಗೆ ದೇಶವೇ ಮುಖ್ಯವಾಗಿದ್ದರೆ ಐಪಿಎಲ್, ಪಿಎಸ್ಎಲ್ ಹಾಗೂ ಇತರ ಲೀಗ್ ಪಂದ್ಯದಿಂದ ದೂರವಿದ್ದು, ಸೌತ್ ಆಫ್ರಿಕಾ ತಂಡಕ್ಕಾಗಿ ಆಡಬಹುದಿತ್ತು ಎಂದು ಶೋಯಿಬ್ ಅಕ್ತರ್ ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಸೌತ್ಆಫ್ರಿಕಾ ಸತತ ಸೋಲು ಕಾಣುತ್ತಿದ್ದಂತೆ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಭಾರಿ ಸುದ್ದಿಯಾಗಿದ್ದಾರೆ. ವಿದಾಯ ಹೇಳಿದ್ದ ಎಬಿ ಡಿವಿಲಿಯರ್ಸ್ 2019ರ ವಿಶ್ವಕಪ್ ಆಡಲು ಬಯಸಿದ್ದರು. ಆದರೆ ಮಂಡಳಿ ಎಬಿಡಿ ಮನವಿಯನ್ನು ತಿರಸ್ಕರಿಸಿದ ಮಾಹಿತಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರರ ಬೆನ್ನಲ್ಲೇ ಎಬಿಡಿ ಮಾಡಿದ ತಪ್ಪನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಿಬ್ ಅಕ್ತರ್ ಬಹಿರಂಗ ಪಡಿಸಿದ್ದಾರೆ.
ವಿದಾಯ ಹೇಳಿದ್ದರೂ ಎಬಿಡಿಗೆ ವಿಶ್ವಕಪ್ ಆಡಲು ಅವಕಾಶ ನೀಡಬೇಕಿತ್ತು ಅನ್ನೋ ಕೂಗುಗಳು ಕೇಳಿಬಂದ ಬೆನ್ನಲ್ಲೇ ವಿರೋಧವೂ ವ್ಯಕ್ತವಾಗಿದೆ. ಎಬಿ ಡಿವಿಲಿಯರ್ಸ್ ದೇಶಕ್ಕಿಂತ ಹಣವೇ ಮುಖ್ಯವಾಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಆಡಿದ್ದಾರೆ. ದಿಢೀರ್ ನಿವೃತ್ತಿ ಹೇಳಿದಾಗ ಇಲ್ಲದ ದೇಶಪ್ರೇಮ ಈಗ ಎಲ್ಲಿಂದ ಬಂತು ಎಂದು ಶೋಯಿಬ್ ಅಕ್ತರ್ ಪ್ರಶ್ನಿಸಿದ್ದಾರೆ.