ಅಂಬಾರಿ ಹೊರಲು ಗಜ ರೆಡಿ

ಅಂಬಾರಿ ಹೊರಲು ಗಜ ರೆಡಿ

ಮೈಸೂರು, ಆ. 22 : ವೀರನಹೊಸಹಳ್ಳಿಯಲ್ಲಿ ಬೀಡು ಬಿಟ್ಟಿದ್ದು, ಆನೆಗಳು ಗಜಪಯಣಕ್ಕೆ ರೆಡಿಯಾಗಿವೆ. ಅಂಬಾರಿ ಹೊರುವ 59 ವರ್ಷದ ಅರ್ಜುನ ಬಳ್ಳೇಕ್ಯಾಂಪಿನಿಂದ, ಮತ್ತಿಗೋಡು ಆನೆ ಶಿಬಿರದ 53 ವರ್ಷದ ಅಭಿಮನ್ಯು, 63 ವರ್ಷದ ವರಲಕ್ಷ್ಮಿ, ದುಬಾರೆ ಆನೆ ಶಿಬಿರದ 36 ವರ್ಷದ ಧನಂಜಯ, 49 ವರ್ಷದ ಈಶ್ವರ, 62 ವರ್ಷದ ವಿಜಯ ಆನೆಗಳು ಈಗಾಗಲೆ ಸಿದ್ಧತೆಯಲ್ಲಿವೆ.
ಮೈಸೂರು, ವಿಶ್ವವಿಖ್ಯಾತ ದಸರಾ ಮಹೋತ್ಸವ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಗಜಪಯಣಕ್ಕೆ ಚಾಲನೆ ನೀಡುತ್ತಾರೆ. ಸಂಪುಟದಲ್ಲಿ ಮೈಸೂರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಹಿನ್ನೆಲೆಯಲ್ಲಿ ನೆರೆ ಪರಿಹಾರ ಕಾರ್ಯದ ಉಸ್ತುವಾರಿ ಹೊತ್ತಿರುವ ಸಚಿವ ಆರ್.ಅಶೋಕ್ ಚಾಲನೆ ನೀಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos