ಬೆಂಗಳೂರು, ನ. 07: ಕನ್ನಡ ಚಿತ್ರರಂಗದಲ್ಲಿ ಕಾಶೀನಾಥ್ ಅವರು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸಿದರಾದರೂ ಅಭಿಮನ್ಯು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇದೀಗ ಅಭಿಮನ್ಯು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
ಹೌದು, ʼಎಲ್ಲಿಗೆ ಪಯಣ ಯಾವುದೋ ದಾರಿʼ ಎಂಬ ಚಿತ್ರದಲ್ಲಿ ಅಭಿಮನ್ಯು ಈಗ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ಕಾಶೀನಾಥ್ ಶಿಷ್ಯರಾದ ರಿಯಲ್ ಸ್ಟಾರ್ ಉಪೇಂದ್ರ ಅವರು ಟೈಟಲ್ ಲಾಂಚ್ ಮಾಡಿದ್ದಾರೆ.
ತಮ್ಮ ತಂದೆ ಕಾಶೀನಾಥ್ ನಿಧನರಾದ ಬಳಿಕ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದ ತಮಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧೈರ್ಯ ತುಂಬಿ, ಏನೇ ಕಷ್ಟ ಬಂದರು ನನಗೆ ಒಂದು ಕಾಲ್ ಮಾಡಿ ಎಂದು ಹೇಳಿದ್ದರು ಎಂದು ಅಭಿಮನ್ಯು ಹೇಳಿಕೊಂಡಿದ್ದಾರೆ.