ಆ.11ರಂದು ರಾಷ್ಟ್ರೀಯ ಸತ್ಸಂಗ ಹಾಗೂ ಸಮಾಧಾನ ಕಾರ್ಯಕ್ರಮ

ಆ.11ರಂದು ರಾಷ್ಟ್ರೀಯ ಸತ್ಸಂಗ ಹಾಗೂ ಸಮಾಧಾನ ಕಾರ್ಯಕ್ರಮ

ಬೆಂಗಳೂರು, ಆ.05: ಅಖಿಲ ಭಾರತೀಯ ಸ್ವಾಮಿ ಸಮರ್ಥ ಗುರುಪೀಠ ಮಹಾರಾಷ್ಟ್ರ ಹಾಗೂ ಬೆಂಗಳೂರು ಸೇವಾ ಕೇಂದ್ರದ ವತಿಯಿಂದ ರಾಷ್ಟ್ರೀಯ ಸತ್ಸಂಗ ಹಾಗೂ ಸಮಸ್ಯೆ ಸಮಾಧಾನ ಕಾರ್ಯಕ್ರಮವನ್ನು ಆ.೧೧ ರಂದು ಆದಿ ಚುಂಚನಗಿರಿ ಸಮುಧಾಯ ಭವನದಲ್ಲಿ ಆಯೋಜಿಲಾಗಿದೆ.
ಅಖಿಲ ಭಾರತೀಯ ಅಷ್ಟಸಿದ್ಧ ಮಹಾಶಕ್ತಿ ಪೀಠದ ಹೆಸರಿನಿಂದ ಈ ಕಾರ್ಯವನ್ನು ಸುಮಾರು ೭೦ ವರ್ಷದಿಂದ ಮಾಡುತ್ತಾ ಬಂದಿದೆ ದೇಶ ವಿದೇಶಗಳಲ್ಲಿ ೫.ಸಾವಿರಕ್ಕಿಂತ ಹೆಚ್ಚು ಸೇವಾ ಕೇಂದ್ರದ ವತಿಯಿಂದ ಕಾರ್ಯಗತವಾಗಿದೆ. ಈ ವರ್ಷದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದು ಅಣ್ಣಾಸಾಹೇಬ ಮೋರೆಜಿ ಇದರ ನೇತೃತ್ವವನ್ನು ವಹಿಸಲಿದ್ದಾರೆ.
ಗುರುಮಾವುಲಿ ಅಣ್ಣಾಸಾಹೇಬ ಮೋರೆಜಿ ಅವರು ಲಕ್ಷಾಂತರ ಸೇವಕರ ಪ್ರತಿಯೊಬ್ಬ ದುಃಖಿಗೆ, ಪೀಡಿತನಿಗೆ, ಸಮಸ್ಯೆಗ್ರಸ್ತ ಭಾವಿಕನ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಉಚಿತ ಮಾರ್ಗದರ್ಶನ ಮಾಡಲಿದ್ದಾರೆ.
ಕಾರ್ಯಕ್ರಮವು ಆ. ೧೧ ರಂದು ಬೆಳಿಗ್ಗೆ ೧೦ರಿಂದ ಮದ್ಯಾಹ್ನ ೪.೨೦ರ ವರೆಗೆ ವಿಜಯನಗರ ಮೆಟ್ರೋ ನಿಲ್ದಾಣದ ಹತ್ತಿರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos