ಮಂಡ್ಯದವರು ಸ್ಥಳೀಯ ಅಭ್ಯರ್ಥಿಗೆ ಒತ್ತು ನೀಡಿ ಸ್ವಾಭಿಮಾನಿಗಳಾಗಬೇಕು: ಎ.ಮಂಜು

ಮಂಡ್ಯದವರು ಸ್ಥಳೀಯ ಅಭ್ಯರ್ಥಿಗೆ ಒತ್ತು ನೀಡಿ ಸ್ವಾಭಿಮಾನಿಗಳಾಗಬೇಕು: ಎ.ಮಂಜು

ಮಂಡ್ಯ, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದವರು ಸ್ವಾಭಿಮಾನಿಗಳಾಗಬೇಕು. ಸ್ಥಳೀಯರಿಗೆ ಒತ್ತು ಕೊಟ್ಟರೆ ಮಂಡ್ಯದ ಗೌರವ ಹೆಚ್ಚುತ್ತೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣದ ವಿರುದ್ಧ ಬೆಳೆದವರು ದೇವೇಗೌಡರು. ಈಗ ಕುಟುಂಬ ಬಿಟ್ಟು ರಾಜಕಾರಣ ಮಾಡಲಾಗಲ್ಲ ಅಂತಾರೆ. ಅಂಬಿಯಿಂದ ಹೆಚ್ಚು ಸಹಾಯ ಆಗಿರೋದೇ ಜೆಡಿಎಸ್ ಗೆ. ಆದರೆ ಅಂತವರೇ ಅಂಬಿ ವಿರುದ್ಧ ಮಾತಾಡ್ತಾರೆ. ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಅಂತಾರೆ. ರೇವಣ್ಣ ಹೆಣ್ಣಿನ ಬಗ್ಗೆ ಸಣ್ಣತನದ ಹೇಳಿಕೆ ಕೊಡ್ತಾರೆ. ಇದು ನಮ್ಮ ಗೌಡ ಜಾತಿಗೆ, ಭಾರತೀಯ ಸಂಸ್ಕೃತಿಗೆ ಅಗೌರವ ಎಂದರು.

ಸ್ಥಳೀಯರಿಗೆ ಟಿಕೆಟ್ ಕೊಡಿಸೋ ಬದಲು ಸಿನಿಮಾ ಟಿಕೆಟ್ ಕೊಡಿಸ್ತಿದ್ದಾರೆ. ದೇವೇಗೌಡರ ಫ್ಯಾಮಿಲಿಯ ರಾಜಕೀಯ ಉದ್ಧಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ನಿಖಿಲ್ ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಅವರಪ್ಪ ಸಿಎಂ, ತಾತಾ ಮಾಜಿ ಪ್ರಧಾನಿ ಸೇವೆ ಮಾಡೋಕೆ ಅಷ್ಟೇ ಸಾಕು, ಅಧಿಕಾರ ಬೇಕಾಗಿಲ್ಲ ಎಂದು ಎಂದು ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.

ಅಂಬಿ ಪಾರ್ಥಿವ ಶರೀರ ತಂದಿದ್ದು ನಾನೇ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಕುಟುಂಬದ ತೀರ್ಮಾನ ಹೊರತು ಸಿಎಂ ಪಾತ್ರವಿಲ್ಲ. ಅಂಬರೀಶ್ ಅವರ ಪಾರ್ಥಿವ ಶರೀರ ಮಂಡ್ಯಕ್ಕೆ ತಂದಿದ್ದೇ ರಾಜಕೀಯ ಲಾಭಕ್ಕಾಗಿ. ಅಂಬಿ ನುಡಿ ನಮನಕ್ಕೆ ಸಾಮೂಹಿಕವಾಗಿ ಗೈರಾಗಿದ್ದರು.  ಆ ಮೂಲಕ ರಾಜಕೀಯ ಉದ್ದೇಶಕ್ಕಾಗಿ ಅನ್ನೋದನ್ನ ಸಾಬೀತು ಮಾಡಿದ್ರು ಎಂದು ಸಿಎಂ ವಿರುದ್ಧವೂ ವಾಗ್ಧಾಳಿ ನಡೆಸಿದರು.

ನಿಖಿಲ್ ನಿಂದ ಅಭಿವೃದ್ಧಿ ಸಾಧ್ಯ ಎಂಬ ವಿಚಾರ:

ಇರೋ ಮೂವರು ಸಚಿವರು ರಾಜೀನಾಮೆ ನೀಡಲಿ. ಅವರೆಲ್ಲ ಅಸಮರ್ಥರು ಅನ್ನೋದನ್ನ ಒಪ್ಪಿಕೊಂಡಂತಾಗಿದೆ. ಹಾಸನದಲ್ಲಿ ದೇವೇಗೌಡ ಸ್ಪರ್ಧಿಸಿದರೆ ಮಾತ್ರ ನಮ್ಮ ಬೆಂಬಲ ಎಂದು ಅವರು ಹೇಳಿದರು.

ಸಚಿವ ಡಿಕೆಶಿ ವಿರುದ್ಧವೂ ಆಕ್ರೋಶ:

ಡಿಕೆಶಿಗೆ ಪಕ್ಷಕ್ಕಿಂತ ಸರ್ಕಾರವೇ ಮುಖ್ಯವಾಗಿದೆ. ಪಕ್ಷವಿದ್ದರೇ ಸರ್ಕಾರ, ಅಧಿಕಾರ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರದಲ್ಲಿ ರಾಹುಲ್ ಪ್ರಧಾನಿ ಅಭ್ಯರ್ಥಿ ಅಂತಾ ಘೋಷಣೆ ಆಗ್ಬೇಕು ಎಂದು ಡಿಕೆಶಿಗೂ ಕುಟುಕಿದರು.

ಕನ್ನಡಿಗರಿಗೆ ಮತ್ತೊಮ್ಮೆ ಪ್ರಧಾನಿ ಅವಕಾಶವಿದೆ ಅಂತ ಎಡವಟ್ಟು ಮಾಡಬಾರದು. ಸುಮಲತಾ ವಿರುದ್ಧ ರೇವಣ್ಣ ಹೇಳಿಕೆ ವಿಚಾರ. ರೇವಣ್ಣ 7ನೇ ಕ್ಲಾಸ್ ಬುದ್ಧಿ ಬಿಡಪ್ಪ ಅಂದ್ರೆ ಸರಿ ಹೋಗುತ್ತ? ಎಂದು ವ್ಯಂಗ್ಯ ಎ.ಮಂಜು ಅವರು ವ್ಯಂಗವಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos