ಟಿ. ನರಸೀಪುರ, ಅ. 17: ನಿಮ್ಮಷ್ಟು ಕೆಲಸ ಮಾಡಲು ಯಾರಿಂದಲು ಸಾಧ್ಯವಿಲ್ಲವೆಂದು ಮಾಜಿ ಸಚಿವ ಹೆಚ್. ಸಿ ಮಹದೇವಪ್ಪರಿಗೆ ಷಾಸ್ಟಾಂಗನಮಸ್ಕಾರ ಹಾಕಿದ ವ್ಯಕ್ತಿ. ಟಿ ನರಸೀಪುರ ತಾಲ್ಲೂಕಿನ ಕನ್ನಹಳ್ಳಿಯಲ್ಲಿ ಮಳೆಯಿಂದಾಗಿ ಮನೆಗಳಿಗೆ ಆಗಿರುವ ಹಾನಿಯನ್ನು ವಿಕ್ಷಿಸಿ ಸಾಂತ್ವಾನ ಹೇಳಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಕನ್ನಹಳ್ಳಿ ಗ್ರಾಮದ ಕೃಷ್ಣ ಎಂಬುವವನಿಂದ ಮಹದೇವಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿ ಷಾಸ್ಟಾಂಗ ನಮಸ್ಕಾರ. ಇಷ್ಟು ಅಭಿವೃದ್ಧಿ ಮಾಡಿ ನಿಮಗೆ ಸೊಲಾಯಿತಲ್ಲ ಇದು ಬಹಳ ನೊವಾಗಿದೆ ಎಂದು ಅಳಲು ತೊಡಿಕೊಂಡ ಕೃಷ್ಣ. ಹೌದ… ನನ್ನಷ್ಟು ಕೆಲಸ ಯಾರಿಂದಲು ಸಾಧ್ಯವಿಲ್ಲವ ಎಂದು ಮರು ಪ್ರಶ್ನೆ ಹಾಕಿದ ಮಾಜಿ ಸಚಿವ ಮಹದೇವಪ್ಪ..