ಅದ್ದೂರಿ ರಥೋತ್ಸವ

ಅದ್ದೂರಿ ರಥೋತ್ಸವ

ಮಹದೇವಪುರ, ಮಾ. 20: ವೈಟ್ ಫೀಲ್ಡ್ ಸಮೀಪದ ಇಮ್ಮಡಿಹಳ್ಲಿಯ ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯಿತು.

ಶಾಸಕ ಅರವಿಂದ್ ಲಿಂಬಾವಳಿ ಅವರು ದೇವತಾ ಮೂರ್ತಿಗಳ ಪಲ್ಲಕಿಯನ್ನು ಹೊತ್ತು ಮೆರವಣಿಗೆ ಮಾಡಿ ನಂತರ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಕಲೆದ ಒಂದು ವಾದದಿಂದ ಅಂಕುರಾರ್ಪನೆ, ಸಿಂಹವಾಹಣೊತ್ಸವ, ಕಳ್ಯಾಣೊತ್ಸವ, ಹನುಮಂತೊತ್ಸವ, ವಿವಿಧ ಹೂವುಗಳಿಂದ ಅಲಂಕಾರ, ವಿಶೇಷ ಪೂಜಾ ಕಾಂಕರ್ಯಗಳು ನೆರವೇರಿಸಲಾಗಿತ್ತು.

ಸುತ್ತಮುತ್ತಲಿನ ಗ್ರಾಮಗಳಾದ ಹಗದೂರು, ವೈಟ್ ಫೀಲ್ಡ್, ಚನ್ನಸಂದ್ರ, ವರ್ತೂರು, ಗುಂಜೂರು, ಹೂಡಿ, ನಲ್ಲೂರಹಳ್ಳಿ, ನಾಗೊಂಡನಹಳ್ಳಿ, ಕಾಡಿಗುಡಿ ಸೇರಿದಂತೆ ನಗರದ ಹಲವಾರು ಗ್ರಾಮಗಳಿಂದ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಇನ್ನೂ ಸಾವಿರಾರು ಭಕ್ತರಿಗೆ ಅನ್ನದಾನ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಸಂಸದರು ಪಿ.ಸಿ.ಮೋಹನ್, ಸ್ಥಳಿಯ ಪಾಲಿಕೆ ಸದಸ್ಯ ಉದಯ್ ಕುಮಾರ್, ದೇವಾಲಯ ದರ್ಮದರ್ಶಿಗಳು ಹನುಮಂತೆ ಗೌಡ, ಬಿ.ನಾರಾಯಣ ಸ್ವಾಮಿ, ಮುಖಂಡರಾದ ಹೆಚ್.ರಾಜೇಶ್,  ಶ್ರೀನಿವಾಸ್.ಹೆಚ್.ಎ, ಮ.ಮೋದಿ, ಯೋಗೇಶ್ ಆರಾದ್ಯ, ಚನ್ನಸಂದ್ರ ಚಂದ್ರಶೇಖರ್, ಎನ್.ಶ್ರೀನಿವಾಸ್, ಯುವ ಅದ್ಯಕ್ಷ ಎಲ್.ರಾಜೇಶ್ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos