ಅನೈತಿಕ ಸಂಬಂದಕ್ಕೆ ಬಲಿಯಾದ ಗಂಡ

ಅನೈತಿಕ ಸಂಬಂದಕ್ಕೆ ಬಲಿಯಾದ ಗಂಡ

ಆನೇಕಲ್, ಅ. 8: ಹೆಣ್ಣು ಮನೆ ಬೆಳಗೋ ದೀಪ ಅಂತರೇ ಎಷ್ಟೋ ಕನಸುಗಳನ್ನು ಕಾಣುತ್ತಾ ಬಾಳಸಂಗತಿಯಾಗಿ ಮಾಡಿಕೊಂಡು ಮನೆ ತುಂಬಿಸಿ ಕೊಳ್ತಾರೆ. ಆದರೆ, ಆ ಹೆಣ್ಣೇ ಹೆಮ್ಮಾರಿಯಾಗಿ ಮನೆಯ ದೀಪವನ್ನು ಆರಿಸೋದಕ್ಕೆ ಕಾರಣ ಆದ್ರರೆ ಹೆಗೆ. ಹೌದು, ಸ್ನೇಹಿತನ ಮಕ್ಕಳ ಹುಟ್ಟುಹಬ್ಬಕ್ಕೆಂದು ಹೋದ ವ್ಯಕ್ತಿ ಸ್ನೇಹಿತನ ಹೆಂಡತಿಯನ್ನೇ ಪಟಾಯಿಸಿ ಆಕೆಯ ಜೊತೆ ಪಲಂಗದಾಟ ಶುರು ಮಾಡಿಕೊಂಡು ಕಳೆದ ಆರು ತಿಂಗಳ ಹಿಂದೆ ಪ್ರಿಯಕರನ ಜೊತೆ ಓಡಿ ಹೋಗಿದ್ರು ಬಿಡದ ಪಾಪಿ ಪ್ರಿಯಕರ ನಿನ್ನೆ ರಾತ್ರಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಪತಿಗೆ ಮೂಹುರ್ತ ಇಟ್ಟು ಗುಂಡಿಕ್ಕಿ ನಡು ರಸ್ತೆಯಲ್ಲಿ ಕೊಲೆಗೈದಿದ್ದಾನೆ.

ಹೀಗೆ ಎದೆಗೆ ಗುಂಡು ಬಿದ್ದು ರಕ್ತದ ಮಡುವಿನಲ್ಲಿ ಬಿದ್ದು ಸಾವನಪ್ಪಿರುವ ದುರ್ದೈವಿ ರಮೇಶ್(35) ಈತ ಅನೇಕಲ್ ತಾಲೂಕಿನ ಜಿಗಣಿ ಸಮೀಪದ ಶ್ರೀರಾಂಪುರ ನಿವಾಸಿ, ನಿನ್ನೆ ರಾತ್ರಿ ಅದೇ ಊರಿನ ವ್ಯಕ್ತಿ ಮುನಿಯಪ್ಪ ಈತನ ಎದೆಗೆ ಡಬ್ಬಲ್ ಬ್ಯಾರಲ್ ಗನ್ನಿನಿಂದ ಗುಂಡು ಹೊಡೆದು ಕೊಲೆ ಮಾಡಿದ್ದಾನೆ.

ರಾತ್ರಿ 10.30 ರ ಸುಮಾರಿನಲ್ಲಿ ಘಟನೆ ನಡೆದಿದ್ದು, ಈ ಕೊಲೆಗೆ ಅನೈತಿಕ ಸಂಬಂಧ ಕಾರಣವಾಗಿದೆ. ರಮೇಶನ ಪತ್ನಿ ಕಲಾ ಹಾಗು ಕೊಲೆ ಆರೋಪಿ ಮುನಿಯಪ್ಪನ ನಡುವೆ 2 ವರ್ಷಗಳಿಂದ ಅನೈತಿಕ ಸಂಬಂಧ ಬೆಳೆದಿತ್ತು ಈ ಹಿನ್ನೆಲೆ ಹಲವು ಬಾರಿ ರಮೇಶ್ ಮತ್ತು ಮುನಿಯಪ್ಪನ ನಡುವೆ ಗಲಾಟೆ ನಡೆಯುತ್ತಿತ್ತು ನಿನ್ನೆಯೂ ಸಹ ಇಬ್ಬರ ನಡುವೆ ಗಲಾಟೆ ನಡೆದಿದ್ದು, ರಾತ್ರಿ ಹೋಟೆಲ್’ನಲ್ಲಿ ಊಟ ಮಾಡಿಕೊಂಡು ಮನೆಗೆ ಹೋಗುವಾಗ ತನ್ನ ಮನೆ ಮುಂದೆ ಬಂದ ರಮೇಶನನ್ನು ಮುನಿಯಪ್ಪ ಗುಂಡಿಟ್ಟು ಕೊಂದಿದ್ದಾನೆ . ಸ್ಥಳೀಯರ ಪ್ರಕಾರ ರಾತ್ರಿ ಗುಂಡಿನ ಶಬ್ದ ಕೇಳಿದ್ದು, ಹೊರಬಂದು ನೋಡುವಷ್ಟರಲ್ಲಿ ರಮೇಶ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದವರಿಗೆ ಮುನಿಯಪ್ಪ ಗನ್ನಿನಿಂದ ಬೆದರಿಸಿದ್ದಾನೆ ಎಂದು ತಿಳಿಸಿದ್ದಾರೆ.

ಇನ್ನು ರಮೇಶ್ ಮುನಿಯಪ್ಪ ಒಂದೇ ಊರಿನವರಾಗಿದ್ದು, ರಮೇಶನ ಮಗನ ಹುಟ್ಟಿದ ಹಬ್ಬಕ್ಕೆ ಬಂದಿದ್ದ ಮುನಿಯಪ್ಪ ರಮೇಶನ ಹೆಂಡತಿಯಯೊಂದಿಗೆ ಸಲುಗೆ ಬೆಳಸಿಕೊಂಡು ಕೆಲದಿನಗಳಲ್ಲಿ ಸಲುಗೆ ಅನೈತಿಕ ಸಂಬಂದಕ್ಕೆ ತಿರುಗಿ ಕಳೆದ 6 ತಿಂಗಳ ಹಿಂದೆ ಮುನಿಯಪ್ಪ ಹಾಗು ಕಲಾ ಇಬ್ಬರು ಮಕ್ಕಳ ಜೊತೆಯಲ್ಲಿ ಮನೆ ಬಿಟ್ಟು ಓಡಿ ಹೋಗಿದ್ರು. ಈ ವೇಳೆ ಮುನಿಯಪ್ಪ ಹಾಗು ರಮೇಶನ ನಡುವೆ ಗಲಾಟೆಯಾಗಿತ್ತು ಇತ್ತ ರಮೇಶ ಹೆಂಡತಿ ಮುನಿಯಪ್ಪನೆ ಬೇಕು ಎಂದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಳು ಇತ್ತ ರಮೇಶ್ ಹಿರಿಯರೊಂದಿಗೆ ರಾಜಿ ಪಂಚಾಯಿತಿ ಮಾಡಿಸಿದ್ದ ಇದರಿಂದ ರೊಚ್ಚಿಗೆದ್ದ ಮುನಿಯಪ್ಪ ನಿನ್ನೆ ರಮೇಶನನ್ಮು ಕೊಲೆಮಾಡಿದ್ದಾನೆ. ಇನ್ನು ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಸುಖದ ಆಸೆಗೆ ಬಿದ್ದ ಹೆಣ್ಣು ಅತ್ತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಕೊಲೆಗೈದು ಜೈಲೂ ಪಲಾದ್ರೆ,ಇತ್ತ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಗಂಡ ಮಸಣ ಸೇರಿದ್ದು ಮಹಿಳೆ ಜನರಿಂದ ಛೀಮಾರಿ ಹಾಕಿಸಿಕೊಂಡು ಬೀದಿಗೆ ಬಿದ್ದಿದ್ದಾಳೆ.

 

ಫ್ರೆಶ್ ನ್ಯೂಸ್

Latest Posts

Featured Videos