ಹಸಿವು ನೀಗುಸುತ್ತಿರುವ ಶಿಶು ಮಂದಿರ

ಹಸಿವು ನೀಗುಸುತ್ತಿರುವ ಶಿಶು ಮಂದಿರ

ಕೆಆರ್ ಪುರ: ಆಪತ್ತಿಗಾದವನೆ ಆಪದ್ಭಾಂದವ ಅನ್ನೊ ಮಾತಂತೆ ಕರೋನಾ ಕಷ್ಟಕಾಲದಲ್ಲಿ ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದಾಗ ಕೆ.ಆರ್.ಪುರದ ಭಟ್ಟರಹಳ್ಳಿಯಲ್ಲಿರುವ ಶಿಶುಮಂದಿರ ಸಂಸ್ಥೆ ಫುಡ್ ಕಿಟ್ ಗಳನ್ನ ವಿತರಿಸಿ ಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಮಾಡುತ್ತಿದೆ.
ಶಿಶುಮಂದಿರ ಸಂಸ್ಥೆಯು ಕರೋನ ಲಾಕ್ ಡೌನ್‌ನಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರೆವಿಗೆ ನಿಂತು ಸಾವೀರಾರು ಕೂಲಿಕಾರ್ಮಿಕರಿಗೆ
ರೇಷನ್ ಕಿಟ್ ಗಳನ್ನು ನೀಡಿತ್ತಾ ಬಂದಿದೆ.ಇವರ ಸಮಾಜ ಸೇವೆ ನೋಡಿ ಟೆಕ್ ಮಹೀಂದ್ರ ಸಂಸ್ಥೆ ಸುಮಾರು ಇಪ್ಪತ್ತು ಲಕ್ಷ ರೂಪಾಯಿಯ ಅಕ್ಕಿ, ಗೋದಿ, ಧಾನ್ಯ, ಎಣ್ಣೆಯನ್ನು ನೀಡಿತ್ತು. ಸೇವಾಮನೋಭಾವದಲ್ಲಿ ಪಡೆದ ಆಹಾರ ಪದಾರ್ಥಗಳನ್ನು ಶಿಶುಮಂದಿರ ಸಂಘಸಂಸ್ಥೆ ಬಡವರನ್ನು ಸರ್ವೇ ಮಾಡಿ ಅರ್ಹಫಲಾನುಭವಿಗಳಿಗೆ ವಿತರಿಸಿತು.
ಶಿಶುಮಂದಿರ ಮತ್ತು ಟೆಕ್ ಮಹೀಂದ್ರ ಸಂಸ್ಥೆ ಕಳೆದ ಒಂದು ವಾರದಿಂದ ಕಿತ್ತಗನೂರು, ಕೆ.ಆರ್.ಪುರ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ
ಬೇರೆ ರಾಜ್ಯಗಳಿಂದ ವಲಸೆ ಬಂದು ಕಟ್ಟಡ ನಿರ್ಮಾಣ ಕೆಲಸ ಮಾಡುವ ನೂರಾರು ಕಡು ಬಡವರನ್ನು ಗುರ್ತಿಸಿ ಅವರ ಆಧಾರ್ ಕಾರ್ಡ್ ಮಾಹಿತಿ ಪಡೆದು ಮೊದಲೇ ಚೀಟಿ ನೀಡಿತ್ತು.. ಆಧಾರ್ ಕಾರ್ಡ್ ಮತ್ತು ಸಂಸ್ಥೆ ನೀಡಿದ್ದ ಚೀಟಿ ತೋರಿಸಿದವರಿಗೆ ಮಾತ್ರ ಫುಡ್ ಕಿಟ್ ವಿತರಿಸಲಾಯಿತು. 10.ಕೆ.ಜಿ ಅಕ್ಕಿ, 5.ಕೆ.ಜಿ ಗೋದಿ ಹಿಟ್ಟು, 2.ಕೆ.ಜಿ ತೊಗರಿಬೇಳೆ, 1ಲೀಟರ್ ಅಡುಗೆ ಎಣ್ಣೆ ಹೊಂದಿದ 500 ಕಿಟ್ ಗಳನ್ನು ವಿತರಿಸಲಾಯಿತು. ಇಂದು ಬೆಳಗ್ಗೆ ಹತ್ತರಿಂದ 12 ಗಂಟೆಯವರೆಗೂ ಸರತಿ ಸಾಲಿನಲ್ಲಿ, ಸಾಮಾಜಿಕ ಅಂತರದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು..

ಫ್ರೆಶ್ ನ್ಯೂಸ್

Latest Posts

Featured Videos