ಪಾವಗಡ: ತಾಲ್ಲೂಕು ಮುಗದಾಳ ಬೆಟ್ಟ ಸರ್ಕಾರಿ ಹಿರಿಯ ಶಾಲೆಯ ಶಿಕ್ಷಕಿ ನಾಗ ಶ್ರೀಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಗದಾಳ ಬೆಟ್ಟ ಶಾಲೆಯ ಶಾಲಾಭಿವೃದ್ಧಿ ಸಮಿತಿ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಗ್ರಾಮಸ್ಥರ ವತಿಯಿಂದ ನಾಗಶ್ರೀ ರವರಿಗೆ ಶಾಲಾ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಮದ್ದಿಬಂಡೆ ವಿಶ್ವನಾಥ್ ಮಾತನಾಡಿ ನಿಸ್ವಾರ್ಥ ಸೇವೆ ಮತ್ತು ನಿಷ್ಠೆ ಕಾರ್ಯನಿಷ್ಠೆ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳಿಗೆ ನೀಡುತಾರೋ ಅಂತಹ ಶಾಲೆ ಮತ್ತು ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು
ಪಾವಗಡ ತಾಲ್ಲೂಕು ಗಡಿಭಾಗದಲ್ಲಿ ಬೋಧಕ ಕರ್ತವ್ಯ ಸಲ್ಲಿಸಿ ಸರ್ಕಾರಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕಂಪ್ಯೂಟರ್ ಮತ್ತು ವೈಜ್ಞಾನಿಕ ಶಿಕ್ಷಣಕ್ಕೆ ಎಚ್ಚು ಒತ್ತು ಕೊಟ್ಟು ಮುಗದಾಳ ಬೆಟ್ಟ ಶಾಲೆಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಿದ ನಾಗಶ್ರೀ ರವರ ಗಣನೀಯ ಸೇವೆಯನ್ನು ಗುರ್ತಿಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಮಕ್ಕಳಿಗೆ ಅವರ ನಿಸ್ವಾರ್ಥ ಸೇವೆಗೆ ಇಲಾಖೆ ಪ್ರಶಸ್ತಿ ಕೊಟ್ಟು ಗೌರವ ನೀಡಿದ್ದಕ್ಕೆ ಇಲಾಖೆ ಗೆ ಧನ್ಯವಾದಗಳು ಮತ್ತು ನಾಗಶ್ರೀ ರವರಿಗೆ ತುಂಬು ಹೃದಯದ ಅಭಿನಂದನೆ ತಿಳಿಸಿದರು
ಜಿಲ್ಲಾ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪಡೆದ ನಾಗಶ್ರೀ ರವರು ಮಾತಾನಾಡಿನಮ್ಮ ಶಾಲೆಯ ಸಮಿತಿ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಗ್ರಾಮದ ಎಲ್ಲರ ಸಹಕಾರದಿಂದ ನಾವು ಇಂತಹ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದರು.