ವೃದ್ದೆ ಜೀವ ಉಳಿಸಿದ ಅಗ್ನಿಶಾಮಕ ದಳ

ವೃದ್ದೆ ಜೀವ ಉಳಿಸಿದ ಅಗ್ನಿಶಾಮಕ ದಳ

ಮಧುಗಿರಿ: ಬಾವಿಗೆ ಬಿದ್ದ ವೃದ್ದೆಯನ್ನು ತಹಸಿಲ್ದಾರ್ ಅವರ ಸಮಯ ಪ್ರಜ್ಞೆಯಿಂದಾಗಿ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಅಪರೂಪದ ಘಟನೆ ನಡೆದಿದೆ.
ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಅಶ್ವಥಪ್ಪ ಮತ್ತು ಲಕ್ಷಮಮ್ಮ ಎಂಬುವರ ಅಡಕೆ ತೋಟದಲ್ಲಿರುವ ಬಾವಿಗೆ ಮೀನಾಕ್ಷಿ ಎಂಬ ೬೦ ವಯಸ್ಸಿನ ವೃದ್ದೆ ತಡ ರಾತ್ರಿ ಬಾವಿಗೆ ಬಿದ್ದಿದ್ದರು.
ಶನಿವಾರ ಮುಂಜಾನೆ ಸ್ಧಳೀಯರು ತಹಶೀಲ್ದಾರ್ ಗಮನಕ್ಕೆ ತಂದ ಕೂಡಲೇ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಡಾ.ವಿಶ್ವನಾಥ್ ಅಗ್ನಿ ಶಾಮಕ ದಳದೊಂದಿಗೆ ಸ್ಥಳಕ್ಕೆ ತೆರಳಿ ವೃದ್ದೆ ಮೀನಾಕ್ಷಿ ಅವರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ವೃದ್ದೆಯ ಪ್ರಾಣ ಉಳಿಸಲು ನೆರವಾದ ಅಗ್ನಿ ಶಾಮಕ ದಳದ ಅಧಿಕಾರಿಗಳಾದ ಟಿ.ಎಸ್.ಅಣ್ಣಪ್ಪ ಗಡಗಿ. ಹಾಗು ಡಿ.ಎಂ.ನಾಗರಾಜು.ಸತೀಶ್ ಕುಮಾರ್.ಪೃಧ್ವಿರಾಜ್. ಪ್ರಶಾಂತ್ ಪಾಟೀಲ್.ಪಿ. ಮಂಜಣ್ಣ ಸಿಬ್ಬಂದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos