ಪೌರ ಕಾರ್ಮಿಕರಿಗೆ ಹಬ್ಬದ ಉಡುಗೊರೆ 

ಪೌರ ಕಾರ್ಮಿಕರಿಗೆ ಹಬ್ಬದ ಉಡುಗೊರೆ 

ಮಹದೇವಪುರ, ಸೆ. 3: ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ದಿನ ನಿತ್ಯದ ಬಳಕೆ ವಸ್ತುಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಶ್ರೀ ವರಪ್ರದಾತ ಪಂಚಮುಖಿ ಮಹಾಗಣಪತಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಎಂ. ರಘುಪತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರದ ಬೆಳ್ಳಂದೂರು ವಾರ್ಡಿನ ಕಾಡುಬಿಸನಹಳ್ಳಿಯ ಶ್ರೀವರಪ್ರದಾತ ಪಂಚಮುಖಿ ಮಹಾಗಣಪತಿ  ದೇವಸ್ಥಾನದ ಸಮಿತಿವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಸಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು‌.

ಸುಮಾರು 50 ಬಿಬಿಎಂಪಿ ಪೌರ ಕಾರ್ಮಿಕರಿಗೆ ದಿನ ನಿತ್ಯದ ವಸ್ತುಗಳು ನೀಡಿ, 3 ಅನಾಥ ಆಶ್ರಮಗಳಾದ ತಾಯಿ ಮನೆ- ಕೊಡತಿ, ನಿರ್ಗುಣ ಸೇವಾ ಆಶ್ರಮ ಟ್ರಸ್ಟ್  -ಚೂಡಸಂದ್ರ, ಅಕ್ಕರೆಯಬೆಳಕು-  ಕಸವನಹಳ್ಳಿ ಆಶ್ರಮಗಳಿಗೆ ತಲಾ 10 ಸಾವಿರದಂತೆ ಒಟ್ಟು 30 ಸಾವಿರು ಪ್ರೋತ್ಸಾಹ ಧನ ಚೆಕ್ ವಿತರಣೆ ಮಾಡಿದರು. ಸ್ಥಳೀಯ ಸಂಚಾರಿ ಪೋಲಿಸರಿಗೆ ಹಬ್ಬದ ಉಡುಗೊರೆಯನ್ನು ನೀಡಿ ಪ್ರತಿಯೊಬ್ಬ ಪೌರ ಕಾರ್ಮಿಕನಿಗೆ ದಿನನಿತ್ಯ ಬಳಕೆ ಮಾಡುವ ವಸ್ತುಗಳನ್ನು ನೀಡಿ ಗೌರವಿಸಿ. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಂಡಿಸಲಾಯಿತು ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷ ರಘುಪತಿ ತಿಳಿಸಿದರು.

ಇದೇವೇಳೆ ಕಾರ್ಯಕ್ರಮದಲ್ಲಿ ಎಚ್.ಎ.ಎಲ್ ಸರ್ಕಲ್ ಇನ್ಸ್‌ಪೆಕ್ಟರ್ ರಘುಪತಿ, ಎ.ಎಸ್.ಐ ಬಸವರಾಜು, ರವಿ, ನಾಗರಾಜು, ಚನ್ನಪ್ಪ, ದೇವಸ್ಥಾನ  ಸಮಿತಿಯ ಪ್ರದಾನ ಕಾರ್ಯದರ್ಶಿ ಸತೀಶ್ ರಾವ್, ಖಜಾಂಚಿ ಪ್ರಸನ್ನ ಕುಮಾರ್,  ಪ್ರಧಾನ ಅರ್ಚಕರಾದ  ಭಾರದ್ವಾಜ್ ಹಾಗೂ ನೂರಾರು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos